ಮುರುಡೇಶ್ವರದ ಕಾಡಿನಲ್ಲಿ ಕಾನೂನುಬಾಹಿರ ಆಟವಾಡುತ್ತಿದ್ದಾಗ ಪಿಎಸ್ಐ ಹಣಮಂತ ಬೀರಾದರ್ ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡ ನಾಲ್ವರು ದಿಕ್ಕಾಪಾಲಾಗಿ ಓಡಿದ್ದಾರೆ. ಅದಾಗಿಯೂ ಪೊಲೀಸರು ಇಬ್ಬರನ್ನು ಹಿಡಿದು ಜೈಲಿಗಟ್ಟಿದ್ದಾರೆ.
ಮೇ 11ರಂದು ಮಾಲೆಕೊಡ್ಲುವಿನ ಅಕೇಶಿಯಾ ಪ್ಲಾಟೇಶನ್ ಒಳಗೆ ಆರು ಜನ ಅಂದರ್ ಬಾಹರ್ ಆಡುತ್ತಿದ್ದರು. ಈ ವಿಷಯ ಅರಿತ ಮುರುಡೇಶ್ವರ ಪಿಎಸ್ಐ ಹಣಮಂತ ಬೀರಾದರ್ ತಮ್ಮ ತಂಡದೊ0ದಿಗೆ ಕಾಡಿನ ಒಳಗೆ ನುಗ್ಗಿದರು. ಚಾಪೆ ಹಾಸಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡಿAದ್ದ ಭಟ್ಕಳ ಬೇಂಗ್ರೆ ಮಾವಿನಕಟ್ಟಾದ ಚಾಲಕ ಜೋಸಿಪ್ ಲೂಯಿಸ್ ಹಾಗೂ ಶಿರಾಳಿ ಮಳ್ಳಿಮನೆ ತಟ್ಟಿಹಕ್ಲುವಿನ ಹೂವಿನ ವ್ಯಾಪಾರಿ ಮಂಜುನಾಥ ನಾಯ್ಕ ಸಿಕ್ಕಿ ಬಿದ್ದರು.
ಪೊಲೀಸರು ಬರುವ ಮುನ್ಸೂಚನೆ ಅರಿತ ಮಾವಿನಕಟ್ಟಾದ ರಾಘು ಹಾಗೂ ಗಣಪತಿ, ಅಳ್ವೆಕೋಡಿಯ ಗಣೇಶ ನಾಯ್ಕ, ಮಾವಿನಕಟ್ಟಾದ ಮೋಹನ ಓಡಿ ಪರಾರಿಯಾದರು. ಅದಾಗಿಯೂ ಪೊಲೀಸರು ಅವರ ಬೆನ್ನಟ್ಟಿದರು. ಆದರೆ, ಕಾಡಿನಲ್ಲಿ ದಿಕ್ಕಾಪಾಲಾಗಿ ಓಡಿದವರು ಮತ್ತೆ ಕಾಣಿಸಿಕೊಳ್ಳಲಿಲ್ಲ. ಸಿಕ್ಕಿಬಿದ್ದವರ ಬಳಿಯಿದ್ದ 3100ರೂ ಹಣದೊಂದಿಗೆ ಅಂದರ್ ಬಾಹರ್ ಆಡಲು ಬಳಸಿದ್ದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದರು.







