6
  • Latest
ವಿಘ್ನನಿವಾರಕನ ಪೂಜೆಗೆ ಸರ್ಕಾರದಿಂದ ವಿಘ್ನ: ರಾಮು ನಾಯ್ಕ ಆಕ್ರೋಶ

ವಿಘ್ನನಿವಾರಕನ ಪೂಜೆಗೆ ಸರ್ಕಾರದಿಂದ ವಿಘ್ನ: ರಾಮು ನಾಯ್ಕ ಆಕ್ರೋಶ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಿಘ್ನನಿವಾರಕನ ಪೂಜೆಗೆ ಸರ್ಕಾರದಿಂದ ವಿಘ್ನ: ರಾಮು ನಾಯ್ಕ ಆಕ್ರೋಶ

ಶ್ರೀ ನ್ಯೂಸ್ by ಶ್ರೀ ನ್ಯೂಸ್
August 7, 2025
in ಸ್ಥಳೀಯ
advt advt advt
ADVERTISEMENT

ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕಾರ್ಯ ಸರ್ಕಾರದಿಂದ ನಿರಂತರವಾಗಿ ನಡೆಯುತ್ತಿದೆ ಎಂದು ನಾಗರಿಕ ವೇದಿಕೆ ಅಧ್ಯಕ್ಷ, ಬಿಜೆಪಿ ಮುಖಂಡ ರಾಮು ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಇನ್ನು ಮುಂದೆ ಗಣೇಶ ಹಬ್ಬವನ್ನು ನಿಮ್ಮ ಪುರಾತನ ಪದ್ಧತಿಯಂತೆ ಆಚರಿಸುವುದನ್ನು ಬಿಡಿ, ಆಚರಿಸುವದಿದ್ದರೆ ಪರಿಸರ ಮಂಡಳಿ ಹೇಳಿದಂತೆ ಆಚರಣೆ ಮಾಡಿ’. ಇದು ಶತ ಶತಮಾನಗಳಿಂದ ಹಿಂದುಗಳು ಆಚರಿಸಿಕೊಂಡು ಬರುತ್ತಿರುವ ಗಣೇಶ ಹಬ್ಬಕ್ಕೆ, ಕರ್ನಾಟಕದ ಘನ ಸರಕಾರ ಈ ವರ್ಷ ಹಾಕಿರುವ ಹೊಸ ಷರತ್ತು.

Advertisement. Scroll to continue reading.
ADVERTISEMENT
ADVERTISEMENT

ಇಲ್ಲಿಯವರೆಗೆ, ಪಿಓಪಿ ಗಣೇಶನನ್ನು ಪ್ರತಿಷ್ಠಾಪಿಸಬಾರದು, ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು, ಅನುಮತಿ ಪಡೆಯದೇ ಪೆಂಡಾಲ ಹಾಕಬಾರದು, ನಿರ್ದಿಷ್ಟ ಪಡಿಸಿದ ನೀರಿನ ಹೊಂಡಗಳನ್ನು ಹೊರತುಪಡಿಸಿ ಬೇರೆ ಕಡೆ ಮಂಗಲಮೂರ್ತಿ ವಿಸರ್ಜಿಸಬಾರದು ಇತ್ಯಾದಿ ಕರಾರುಗಳನ್ನು ನಾವು ಕೇಳಿ, ಒಪ್ಪಿಕೊಂಡದ್ದೂ ಆಯಿತು. ಈ ವರ್ಷ ಇನ್ನೂ ಕೆಲವು ಷರತ್ತುಗಳನ್ನು ವಿಧಿಸಿದೆ.

Advertisement. Scroll to continue reading.

ಇನ್ನು ಮುಂದೆ ಸಾರ್ವಜನಿಕರು ಬಣ್ಣರಹಿತ ಗಣೇಶನನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಮೂರ್ತಿಯ ಎತ್ತರ ಐದು ಅಡಿ ಮೀರಬಾರದು. ಯಾವುದೇ ಕಾರಣಕ್ಕೂ ತಿಂಗಳುಗಟ್ಟಲೆ ಮೂರ್ತಿಯ ಪ್ರತಿಷ್ಠಾಪನೆ ಅಥವಾ ವಿಸರ್ಜನೆ ಇಟ್ಟುಕೊಳ್ಳಬಾರದು. ಮಂಟಪದಲ್ಲಿ ಅಲಂಕಾರಕ್ಕಾಗಿಯೂ ಬಲೂನು ಅಥವಾ ಥರ್ಮಾಕೋಲ್ ಉಪಯೋಗಿಸಬಾರದು. ತೆಳ್ಳಗಿರಲಿ ಅಥವಾ ಸರಕಾರ ಅಂಗೀಕರಿಸಿದಷ್ಟು ಮೈಕ್ರಾನ್ ದಪ್ಪದ್ದೇ ಆಗಿರಲಿ, ಯಾವುದೇ ಪ್ಲಾಸ್ಟಿಕ್ ಚೀಲಗಳು, ಲೋಟಗಳು, ಫ್ಲಾಕ್ಸ್ ಬ್ಯಾನರ್, ಡೈನಿಂಗ್ ಟೇಬಲ್ ಕ್ಲಾಥ ಇತ್ಯಾದಿಗಳನ್ನು ಬಳಸಬಾರದು.

ರಾತ್ರಿ 10 ರಿಂದ ಬೆಳಿಗ್ಗೆ 6 ಘಂಟೆಯವರೆಗೆ ಧ್ವನಿವರ್ಧಕ ಬಳಸಬಾರದು. (ಉಳಿದವರು ಬೆಳಿಗ್ಗೆ 5 ಘಂಟೆಗೇ ಬಳಸಿದರೂ ನಾವು ತಕರಾರು ಮಾಡಬಾರದು?.) ಹಸಿರು ಪಟಾಕಿಗಳನ್ನು ಮಾತ್ರ ಸುಡಬೇಕು. ಈ ಪಟಾಕಿಗಳ ಮೇಲೆ CSIR ಮತ್ತು NEERI ಚಿನ್ನೆ ಮತ್ತು ಕೋಡ್ ಕಡ್ಡಾಯವಾಗಿ ಮುದ್ರಿಸಿರಬೇಕು. (ಪ್ರತಿಯೊಂದು ಪಟಾಕಿಯ ಮೇಲೂ ಈ ಕೋಡಗಳನ್ನು ನೋಡುವವರು ಹಾಗೂ ಅವುಗಳ ಸತ್ಯಾ ಸತ್ಯತೆಯನ್ನು ಪರೀಕ್ಷೆ ಮಾಡುವವರು ಯಾರು?.)
ಮೂರ್ತಿ ತಯಾರಿಕರು ಕೇವಲ ನೈಸರ್ಗಿಕ ಬಣ್ಣವನ್ನು ಮಾತ್ರ ಉಪಯೋಗಿಸಬೇಕು. ( ನೈಸರ್ಗಿಕ ಬಣ್ಣ ಅಂದರೆ, ಅದು ಯಾವುದು?. ಕೇವಲ ಮಣ್ಣು ಮಿಶ್ರಿತ ನೀರೇ?.) ಇಂತಹ ಹತ್ತು ಹಲವು ಗೊಂದಲ, ಆಧ್ವಾನಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿದ ಹೊಸ ಆದೇಶದಲ್ಲಿದೆ.

ಇವರ ಕಟ್ಟುಪಾಡು ಹೀಗೇ ಮುಂದುವರೆದರೆ, ಮುಂದೊಂದು ದಿನ ನಮ್ಮ ನಮ್ಮ ಸ್ವಂತ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಟಾಪಿಸಲೂ ಸರಕಾರಕ್ಕೆ ಇಂತಿಷ್ಟು ಫೀಸು ಕಟ್ಟಿ ಪರವಾನಗಿ ಪಡೆಯುವ ದಿನಗಳೂ ಬರಬಹುದು ಎಂದು ರಾಮು ನಾಯ್ಕ ಆತಂಕ‌ ವ್ಯಕ್ತಪಡಿಸಿದ್ದಾರೆ.

ShareSendTweetShare
ADVERTISEMENT
Previous Post

ಬೆಂಕಿಯಲ್ಲಿ ಬೆಂದವಳ ಬದುಕು ಅಂತ್ಯ

Next Post

ಟಿಎಂಎಸ್ ನಿಂದ ವಿ.ಟಿ.ಹೆಗಡೆ ಅವರಿಗೆ ಗೌರವದ ಬೀಳ್ಕೊಡುಗೆ

Next Post
ಟಿಎಂಎಸ್ ನಿಂದ ವಿ.ಟಿ.ಹೆಗಡೆ ಅವರಿಗೆ ಗೌರವದ ಬೀಳ್ಕೊಡುಗೆ

ಟಿಎಂಎಸ್ ನಿಂದ ವಿ.ಟಿ.ಹೆಗಡೆ ಅವರಿಗೆ ಗೌರವದ ಬೀಳ್ಕೊಡುಗೆ

ಬೈಕ್ ಸವಾರನ ಮೇಲೆ ಎಗರಿದ ಚಿರತೆ

ಬೈಕ್ ಸವಾರನ ಮೇಲೆ ಎಗರಿದ ಚಿರತೆ

ರೇಖಾ ನಾಯ್ಕ ಯಲ್ಲಾಪುರದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ

ರೇಖಾ ನಾಯ್ಕ ಯಲ್ಲಾಪುರದ ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.