ಯಲ್ಲಾಪುರ ಕಾಳಮ್ಮನಗರದ ಬಳಿ ರಸ್ತೆಯಲ್ಲಿ ಪೊಲೀಸರ ಎದುರೇ ಹೊಡೆದಾಡಿಕೊಂಡ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕಾಳಮ್ಮನಗರದ ಸಮೀರ್ ಮೆಹಬೂಬಸಾಬ ಕರೋಸಿ, ಸವಣಗೇರಿಯ ಸೂಫಿಯಾನ ಖಾನ್ ಅಬ್ದುಲ್ ಕರೀಂ ಖಾನ್, ಹುಬ್ಬಳ್ಳಿಯ ಭಾಷಾ ನಜೀರ್ ಶೇಖ್ ಹಾಗೂ ಉಮ್ಮಚಗಿಯ ಅಫಜಾನ್ ಎಂಬವರು ಕಾಳಮ್ಮನಗರದ ಬಳಿಯ ರಸ್ತೆಯಲ್ಲಿ ಪೊಲೀಸರ ಎದುರಿನಲ್ಲೇ ಹೊಡೆದಾಟ ಮಾಡಿಕೊಂಡಿದ್ದಾರೆ.
ಶಾಂತತಾ ಭಂಗಕ್ಕೆ ಯತ್ನಿಸಿದ ಈ ನಾಲ್ವರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







