ಯಲ್ಲಾಪುರದ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಸೋಮವಾರ ಇಂಜನಿಯರ್ ದಿನ ಆಚರಿಸಲಾಯಿತು.
ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ನಾಡಿಗೆ ವಿಶ್ವೇಶ್ವರಯ್ಯ ಅವರ ಕೊಡುಗೆಯನ್ನು ಸ್ಮರಿಸಲಾಯಿತು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜನಿಯರ್ ಸಂಜೀವ್, ಸಹಾಯಕ ಇಂಜನಿಯರ್ ಪ್ರಶಾಂತ್ ರವಿ, ಗುತ್ತಿಗೆದಾರರಾದ ಅಶೋಕ ನಾಯ್ಕ ಇಡಗುಂದಿ, ಎಸ್ ವಿ ಭಟ್ಟ, ಮಾರುತಿ ಬೋವಿವಡ್ಡರ್, ಸುರೇಶ, ವಿನಯ ಹೆಗಡೆ, ಸುಬ್ರಾಯ ಮುಂತಾದವರು ಭಾಗವಹಿಸಿದ್ದರು.







