ಯಲ್ಲಾಪುರ ತಾಲೂಕಿನ ಬಾಸಲ ಸಮೀಪದ ವಾಗಳ್ಳಿಯಲ್ಲಿ ಎಲೆ ಕೊಯ್ಯಲೆಂದು ಅಡಕೆ ಮರಕ್ಕೆ ಹತ್ತುವಾಗ ಆಕಸ್ಮಿಕವಾಗಿ ಕಾಲು ಜಾರಿ ಮರದ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ವೃದ್ಧನೊಬ್ಬ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ವಾಗಳ್ಳಿಯ ಅಂಬ್ಡೆಪಾಲಿನ ಗಣಪತಿ ಶಿವರಾಮ ಗಾಂವ್ಕರ್ (96 ) ಮೃತ ವೃದ್ಧ.
ಕವಳಕ್ಕೆಂದು ಎಲೆ ಕೊಯ್ಯಲು ತೋಟಕ್ಕೆ ಹೋಗಿದ್ದ ಇವರು, ಏಣಿಯ ಮೂಲಕ ಎಲೆ ಬಳ್ಳಿ ಇರುವ ಅಡಕೆ ಮರವನ್ನು ಹತ್ತುತ್ತಿರುವಾಗ ಆಯತಪ್ಪಿ ಅಲ್ಲೇ ಪಕ್ಕದಲ್ಲಿದ್ದ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







