ಯಲ್ಲಾಪುರದ ಟಿಎಂಎಸ್ ಆಡಳಿತ ಮಂಡಳಿಯ ಆಯ್ಕೆಗೆ ಭಾನುವಾರ ಮತದಾನ ಪ್ರಕ್ರಿಯೆ ನಡೆಯಿತು.
ಜೋರಾದ ಮಳೆಯ ನಡುವೆಯೂ ತಾಲೂಕಿನ ವಿವಿಧೆಡೆಯಿಂದ ಸಂಘದ ಸಾವಿರಾರು ಸದಸ್ಯರು ಬಂದು ಉತ್ಸಾಹದಿಂದಲೇ ಮತ ಚಲಾಯಿಸಿದರು.
ಒಟ್ಟು 14 ಸ್ಥಾನಗಳಲ್ಲಿ ಹಿಂದುಳಿದ ಬ ವರ್ಗ ಹಾಗೂ ಪರಿಶಿಷ್ಟ ಜಾತಿಯ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಉಳಿದ 12 ಸ್ಥಾನಗಳ ಆಯ್ಕೆಗೆ ಸದಸ್ಯರು ಮತ ಚಲಾಯಿಸಿದರು.
ಹಾಲಿ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಶಿಕುಂಬ್ರಿ ಹಾಗೂ ಇಡಗುಂದಿ ಸೊಸೈಟಿ ಅಧ್ಯಕ್ಷ ನಾರಾಯಣ ಭಟ್ಟ ಬಟ್ಲಗುಂಡಿ ತಂಡಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಚುನಾವಣಾ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ತೀರ್ಪು ಬಂದ ನಂತರ ಮತ ಎಣಿಕೆ ನಡೆಯಲಿದೆ.
ಪದೇ ಪದೇ ನ್ಯಾಯಾಲಯದ ಮೊರೆ ಹೋಗುತ್ತಿರುವುದು, ಚುನಾವಣಾ ಪ್ರಚಾರದ ಅಬ್ಬರದಿಂದಾಗಿ ಚುನಾವಣೆ ವಿಶೇಷತೆ ಪಡೆದಿದೆ. ಆದರೆ ನ್ಯಾಯಾಲಯದ ತೀರ್ಪು ಪ್ರಕಟವಾಗುವವರೆಗೂ ಸದಸ್ಯರು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯಬೇಕಾದದ್ದು ಅನಿವಾರ್ಯ.







