ಯಲ್ಲಾಪುರ ತಾಲೂಕಿನ ಕಿರವತ್ತಿಯ ಜಯಂತಿನಗರದ ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರ ಎದುರೇ ಹೊಡೆದಾಡಿಕೊಂಡು ಶಾಂತತಾ ಭಂಗ ಉಂಟು ಮಾಡಿದ 8 ಜನರ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರವತ್ತಿಯ ಜಯಂತಿನಗರದ ಲಕ್ಷ್ಮಣ ಅಡಿವೆಪ್ಪ ಜಂಗಳಿ, ಅಡಿವೆಪ್ಪ ಲಕ್ಷ್ಮಣ ಜಂಗಳಿ, ಮಹೇಶ ಲಕ್ಷ್ಮಣ ಜಂಗಳಿ, ದ್ಯಾಮಣ್ಣ ಅಡಿವೆಪ್ಪ ಜಂಗಳಿ, ಮಂಜುನಾಥ ಸುರೇಶ ಸಿದ್ದಪ್ಪನವರ್, ಶಿವಾನಂದ ಬಸವಣ್ಣೆಪ್ಪ ರೊಟ್ಟಿಗೌಡರ್, ಅಭಿಷೇಕ ಮುದುಕಪ್ಪ ವರದಾನಿ, ನಿತೀನ ಕರಿಬಸಪ್ಪ ವರದಾನಿ ಎಂಬವರು ಜಯಂತಿನಗರದ ರಸ್ತೆಯಲ್ಲಿ ಪೊಲೀಸರ ಎದುರೇ ಹೊಡೆದಾಡಿಕೊಂಡಿದ್ದಾರೆ.
ಸ್ಥಳೀಯ ಮುಖಂಡ ತೆಹಮತುಲ್ಲಾ ಅಬ್ಬಿಗೇರಿ, ಪೊಲೀಸ್ ಸಿಬ್ಬಂದಿ ರಾಘವೇಂದ್ರ ಮುಳೆ, ಅಕ್ಷಯ ಮರಾಠಿ, ಪರಮೇಶ ಅವರ ಎದುರಿನಲ್ಲೇ ಹೊಡೆದಾಡಿಕೊಂಡಿದ್ದು, ನಂತರ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







