ಯಲ್ಲಾಪುರ ತಾಲೂಕಿನ ಕಿರವತ್ತಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಅನೇಕ ವರ್ಷಗಳ ಬೇಡಿಕೆ, ‘ಸುಸಜ್ಜಿತ ಸರಕಾರಿ ಆಸ್ಪತ್ರೆ’ ಯ ಕನಸು ಈಡೇರಿದೆ ಎಂದು ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ.
ಆರೋಗ್ಯ ಕ್ಷೇತ್ರ ಇಂದಿನ ದಿನಮಾನಗಳಲ್ಲಿ ಬಹು ಬೇಡಿಕೆಯ ಕ್ಷೇತ್ರವಾಗಿದೆ. ಅದರಲ್ಲೂ ನಮ್ಮ ತಾಲೂಕಿನಲ್ಲಿಯೇ ಅತ್ಯಂತ ದೊಡ್ಡ ಜನವಸತಿ ಹೊಂದಿರುವ, ಕಿರವತ್ತಿಯಂತಹ ಗ್ರಾಮೀಣ ಪ್ರದೇಶದಲ್ಲಿ, ಇಂತಹ ಸುಸಜ್ಜಿತ ಆಸ್ಪತ್ರೆಯ ಬಹಳ ಅವಶ್ಯಕತೆ ಇತ್ತು.
ಸಮಾಜದ ತೀರಾ ಹಿಂದುಳಿದ ಮರಾಠಾ,ಗೌಳಿ,ಸಿದ್ದಿ,ಕುಣಬಿ ಇತ್ಯಾದಿ ಜನಸಮುದಾಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ, ಕಿರವತ್ತಿ,ಮದನೂರು,ಕಣ್ಣಿಗೇರಿ,ಸಂಗಟಿಕೊಪ್ಪ,ದೇವಿಕೊಪ್ಪ ಗ್ರಾಮ ಪಂಚಾಯತಗಳ ಜನರಿಗೆ ಕೇವಲ ಹತ್ತು ಕಿ.ಮಿ.ಅಂತರದಲ್ಲಿ ಸುಸಜ್ಜಿತ ಸರಕಾರಿ ಆರೋಗ್ಯಕೇಂದ್ರದ ಸೌಲಭ್ಯ ದೊರಕಲಿದೆ.
ಯಾವುದೇ ತುರ್ತು ಚಿಕಿತ್ಸೆಗಳಿಗೆ 25 ಕಿ.ಮಿ.ದೂರದ ಯಲ್ಲಾಪುರ ಅಥವಾ 40 ಕಿ.ಮಿ. ದೂರದ ಹುಬ್ಬಳ್ಳಿಗೆ ಹೋಗುವ ಧಾವಂತ ತಪ್ಪಲಿದೆ ಎಂದಿರುವ ಅವರು, ಇದಕ್ಕೆ ಪ್ರಮುಖ ಕಾರಣೀಕರ್ತರಾಗಿರುವ ಕ್ಷೇತ್ರದ ಶಾಸಕ ಶ್ರೀ ಶಿವರಾಮ ಹೆಬ್ಬಾರ್ ಹಾಗೂ ಪ್ರಯತ್ನಿಸಿದ ಎಲ್ಲರಿಗೆ ನಾಗರಿಕ ವೇದಿಕೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ







