ಜಿಲ್ಲಾ ಗೋಸೇವಾ ಗತಿವಿಧಿಯ ಶಿರಸಿ ವಿಭಾಗ, ಪಂಚಗವ್ಯ ಚಿಕಿತ್ಸೆ ಮತ್ತು ಗವ್ಯೋತ್ಪನ್ನ ಮಾರಾಟ ಆಯಾಮ, ಶ್ರೀ ಗೋವರ್ಧನ ಗೋಶಾಲೆ ಕರಡೊಳ್ಳಿ, ಧನ್ವಂತರಿ ಆಯುರ್ವೇದಿಕ್ ಮಹಾವಿದ್ಯಾಲಯ ಸಿದ್ದಾಪುರ ಹಾಗೂ ಸಂಕಲ್ಪ ಸೇವಾ ಸಂಸ್ಥೆ ಯಲ್ಲಾಪುರ ಇವರ ಸಂಯುಕ್ತ ಆಶ್ರಯದಲ್ಲಿ ಪಂಚಗವ್ಯ ಚಿಕಿತ್ಸೆ ಹಾಗೂ ಗವ್ಯೋತ್ಪನ್ನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನವೆಂಬರ್ 4 ರಂದು ಯಲ್ಲಾಪುರದ ಗಾಂಧಿ ಕುಟೀರದಲ್ಲಿ ಆಯೋಜಿಸಲಾಗಿದೆ.
ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಪಂಚಗವ್ಯ ಚಿಕಿತ್ಸೆ ನಡೆಯಲಿದ್ದು, ಡಾ.ಡಿ.ಪಿ.ರಮೇಶ, ಡಾ.ಪದ್ಮಾವತಿ ಕುಲಕರ್ಣಿ, ಡಾ.ವಿಜಯಕುಮಾರ ಮಠ ಉಪಸ್ಥಿತರಿದ್ದು ಚಿಕಿತ್ಸೆ ನೀಡಲಿದ್ದಾರೆ. ಪಂಚಗವ್ಯ ಆಧಾರಿತ ಕ್ಯಾನ್ಸರ್ ಪೂರಕ ಚಿಕಿತ್ಸೆ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
ಕ್ಯಾನ್ಸರ್ ಚಿಕಿತ್ಸೆಗೆ ಹಿಂದಿನ ತಪಾಸಣಾ ದಾಖಲೆಗಳನ್ನು ತರಬೇಕು. ತಪಾಸಣೆಗೆ ಒಳಪಡಲು ಇಚ್ಛಿಸುವವರು ನವೆಂಬರ್ 3 ರ ಒಳಗೆ ನಾರಾಯಣ ಸಭಾಹಿತ- 8762520989 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.
ಅಕ್ಟೋಬರ್ 31 ರಿಂದ ನವೆಂಬರ್ 4 ರವರೆಗೆ ಗಾಂಧಿ ಕುಟೀರದ ಆವಾರದಲ್ಲಿ ನಡೆಯಲಿರುವ 39 ನೇ ಸಂಕಲ್ಪ ಉತ್ಸವದ ಸಂದರ್ಭದಲ್ಲಿ ಗವ್ಯೋತ್ಪನ್ನಗಳನ್ನು ಮಳಿಗೆಗಳಲ್ಲಿ ಇಡಲು ಮುಕ್ತ ಅವಕಾಶವಿದೆ. ಆಸಕ್ತರು ಅಕ್ಟೋಬರ್ 28 ರ ಒಳಗೆ ಗಣಪತಿ ಭಟ್ಟ ಕೋಲಿಬೇಣ- 8762759240, ನಾರಾಯಣ ಸಭಾಹಿತ- 8762520989 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪ್ರಕಟಣೆಯಲ್ಲಿ ಕೋರಲಾಗಿದೆ.







