ಕಡಿಮೆ ಬೆಲೆಗೆ ಲ್ಯಾಪ್ ಟಾಪ್ ನೀಡುವುದಾಗಿ ಹೇಳಿ 3.75 ಲಕ್ಷ ರೂ ನಾಮ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಂಬಾರದ ಜಗದೀಶ ಖಾರ್ವಿ ಅವರು ಅಂಕೋಲಾದ ಕಾಂಗ್ರೆಸ್ ಕಚೇರಿಯಲ್ಲಿ ಇದ್ದಾಗ ಅಲ್ಲಿಗೆ ಬಂದ ವ್ಯಕ್ತಿ ತನ್ನನ್ನು ಯಶಸ್ ಬಿ.ಎಸ್ ಎಂದು ಪರಿಚಯಿಸಿಕೊಂಡು, ತನ್ನದು ಬೆಂಗಳೂರಿನಲ್ಲಿ ಎನ್.ಜಿ ಒ ಇದೆ. ಅದರ ಮೂಲಕ ಒಳ್ಳೆಯ ಕಂಪನಿಯ ಲ್ಯಾಪ್ ಟಾಪ್ ಗಳನ್ನು ಕಡಿಮೆ ದರದಲ್ಲಿ ನೀಡುವುದಾಗಿ ಹೇಳಿದ್ದಾನೆ.
ಇದನ್ನು ನಂಬಿದ ಜಗದೀಶ ಅವರು, ಡೆಲ್ ಕಂಪನಿಯ 15 ಲ್ಯಾಪ್ ಟಾಪ್ ಆರ್ಡರ್ ಮಾಡಿ, ತನ್ನ ಖಾತೆಯಿಂದ 3.75 ಲಕ್ಷ ರೂ ಆರ್.ಟಿ.ಜಿ.ಎಸ್ ಮಾಡಿದ್ದಾರೆ. ಹಣ ಪಡೆದ ವ್ಯಕ್ತಿ ಲ್ಯಾಪ್ಟಾಪನ್ನೂ ನೀಡದೇ, ಹಣವನ್ನೂ ವಾಪಸ್ ಮಾಡದೇ ಮೋಸ ಮಾಡಿದ್ದಾನೆಂದು ಜಗದೀಶ ಖಾರ್ವಿ ದೂರಿದ್ದಾರೆ. ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







