ಗೇಟ್ ಎದುರು ನಿಲ್ಲಿಸಿದ್ದ ಸ್ಕೂಟಿಯನ್ನು ಯಾರೋ ಕದ್ದೊಯ್ದ ಘಟನೆ ಯಲ್ಲಾಪುರದ ಕಾಳಮ್ಮನಗರದಲ್ಲಿ ನಡೆದಿದೆ.
ಅಡಕೆ ವ್ಯಾಪಾರಿ ರಾಘವೇಂದ್ರ ಭಟ್ಟ ಅವರು ಕಾಳಮ್ಮನಗರದ ಎಂ.ಎಚ್ ನಾಯ್ಕ ಕಂಪೌಂಡ್ ಬಳಿಯ ತಮ್ಮ ಮನೆಯ ಎದುರಿನ ಗೇಟ್ ಬಳಿ ಸ್ಕೂಟಿ ನಿಲ್ಲಿಸಿದ್ದರು. ಅದನ್ನು ಯಾರೋ ಕದ್ದೊಯ್ದಿದ್ದಾರೆ.
ಕಳೆದ ಅಕ್ಟೋಬರ್ 15 ರ ಮಧ್ಯಾಹ್ನ 3 ರಿಂದ ಸಂಜೆ 5 ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಈ ಬಗ್ಗೆ ರಾಘವೇಂದ್ರ ಭಟ್ಟ ದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







