ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಯಲ್ಲಾಪುರ ಲೂಕಿನ ಹುಲಗೋಡ ಬಳಿ ನಡೆದಿದೆ.
ಮುಂಡಗೋಡ ತಾಲೂಕಿನ ಉಗ್ಗಿನಕೇರಿಯ ಪೇದ್ರು ಸೆಬಾಸ್ಟೀನ್ ಕಾರ್ಮೆಲ್ ಸಿದ್ದಿ (24) ಮೃತ ಬೈಕ್ ಸವಾರ.
ADVERTISEMENT
ಕಿರವತ್ತಿಯಿಂದ ಹುಲಗೋಡ ಕಡೆಗೆ ಬೈಕ್ ಮೇಲೆ ಬರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದಿದೆ. ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







