ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರದ ಮಂಜುನಾಥನಗರದಲ್ಲಿ ನಡೆದಿದೆ.
ಹೇಮಂತ ಬಸವಂತಪ್ಪ ಕಾಪ್ಸೆ (57) ಮೃತ ವ್ಯಕ್ತಿ. ಎರಡು ವರ್ಷಗಳಿಂದ ಇವರ ಹೆಂಡತಿ ಇವರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಇದರಿಂದ ಬೇಸರಗೊಂಡಿದ್ದರು.
ಇದೇ ವಿಷಯದಿಂದ ಮನನೊಂದು ಲುಂಗಿಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಕುಟುಂಬದವರು ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







