ಮನೆಯ ಹಂಚು ತೆಗೆದು ಒಳನುಗ್ಗಿದ ಕಳ್ಳರು ಆಭರಣಗಳನ್ನು ದೋಚಿದ ಘಟನೆ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಸಮೀಪದ ಸಾರಬೈಲಿನಲ್ಲಿ ನಡೆದಿದೆ.
ಸಾರಬೈಲಿನ ಮಿಲಾಗ್ರಿ ಸುನೀಲ ವಾಜ್ ಅವರ ಮನೆಯ ಹಂಚು ತೆಗೆದು ಒಳಕ್ಕೆ ಬಂದ ಕಳ್ಳರು ಚಾವಿಯನ್ನು ಹುಡುಕಿ, ಕಪಾಟಿನ ಬಾಗಿಲು ತೆಗೆದಿದ್ದಾರೆ.
ಅದರಲ್ಲಿದ್ದ ಬಂಗಾರದ ಮಂಗಳಸೂತ್ರ, ಬಂಗಾರದ ಎರಡು ಕಿವಿಯೋಲೆಗಳು, ಬೆಳ್ಳಿಯ ಕಾಲ್ಗೆಜ್ಜೆಗಳು ಸೇರಿ ಒಟ್ಟು 1.13 ಲಕ್ಷ ರೂ ಮೌಲ್ಯದ ಆಭರಣಗಳನ್ನು ಕದ್ದೊಯ್ದಿದ್ದಾರೆ. ಹಂಚು ತೆಗೆದು ಮನೆಯೊಳಕ್ಕೆ ಇಳಿದ ಕಳ್ಳರು, ಹಿಂಬಾಗಿಲಿನಿಂದ ನಾಪತ್ತೆಯಾಗಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







