ಅಡಕೆ ಮರಕ್ಕೆ ಬೆಳೆದ ಸುಮಾರು 10 ಕ್ವಿಂಟಲ್ ಅಡಕೆಯನ್ನು ಹಗಲಿನಲ್ಲೇ ಕಳ್ಳರು ಕೊಯ್ದುಕೊಂಡು ಹೋದ ಘಟನೆ ಯಲ್ಲಾಪುರ ತಾಲೂಕಿನ ದೋಣಗಾರಿನಲ್ಲಿ ನಡೆದಿದೆ.
ದೋಣಗಾರಿನ ವಿಶ್ವೇಶ್ವರ ವೆಂಕಟರಮಣ ಹೆಬ್ಬಾರ ಅವರ ಅಡಕೆ ತೋಟಕ್ಕೆ ನುಗ್ಗಿದ ಕಳ್ಳರು ಮರ ಹತ್ತಿ ಕೊನೆ ಕೊಯ್ದಿದ್ದಾರೆ. 35-40 ಮರಗಳಲ್ಲಿ ಬೆಳೆದಿದ್ದ ಸುಮಾರು 1 ಲಕ್ಷ ರೂ ಮೌಲ್ಯದ 10 ಕ್ವಿಂಟಲ್ ಅಡಕೆಯನ್ನು ಕದ್ದೊಯ್ದಿದ್ದಾರೆ.
ಈ ಕುರಿತು ಹೆಬ್ಬಾರ ಅವರು ದೂರು ನೀಡಿದ್ದು, ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







