ಯಲ್ಲಾಪುರ ತಾಲೂಕಿನ ಹಾಸಣಗಿ ಬೆಂಡಿಗೇರಿಯ ಶ್ರೀ ದ್ಯಾಮವ್ವ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾದ ಕುರಿತು ಒಂದು ವಾರದ ನಂತರ ಪ್ರಕರಣ ದಾಖಲಾಗಿದೆ.
ಕಳೆದ ಅಕ್ಟೋಬರ್ 31 ರಂದು ದ್ಯಾಮವ್ವ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎರಡು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು 14 ಸಾವಿರ ರೂಗಳನ್ನು ಕದ್ದೊಯ್ದಿದ್ದಾರೆ.
ಈಗಾಗಲೇ ಅಡಕೆ ಕಳ್ಳತನ ಮಾಡಿ ಪೊಲೀಸರ ವಶದಲ್ಲಿರುವ ಬೆಂಡಿಗೇರಿಯ ಹರುಷ ಈರಪ್ಪ ಬೋವಿವಡ್ಡರ್ ಹಾಗೂ ಗೌಡಳ್ಳಿಯ ಭಾಸ್ಕರ ಕೃಷ್ಣ ಬೋವಿವಡ್ಡರ್ ಇವರ ಮೇಲೆ ಸಂಶಯವಿದ್ದು, ಸರಿಯಾಗಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ದೇವಸ್ಥಾನದ ಸಮಿತಿಯ ವಿನೋದ ಸುರೇಶ ತಳೇಕರ್ ದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







