ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಕುಂಕಿಯಲ್ಲಿ ನ.14 ರಂದು ಸಂಜೆ 4 ಕ್ಕೆ ಲಕ್ಷ್ಮೀನರಸಿಂಹ ಹವನದ ಪ್ರಯುಕ್ತ ಭೀಷ್ಮಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ನಡೆಯಲಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಅನಂತ ಹೆಗಡೆ ದಂತಳಿಗೆ, ದಿನೇಶ ಭಟ್ಟ ಯಲ್ಲಾಪುರ, ಮದ್ದಲೆವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆವಾದಕರಾಗಿ ಪ್ರಶಾಂತ ಹೆಗಡೆ ಕೈಗಡಿ ಭಾಗವಹಿಸುವರು.
ಅರ್ಥಧಾರಿಗಳಾಗಿ ಶ್ರೀನಿವಾಸ ಭಾಗ್ವತ ಮತ್ತಿಘಟ್ಟ, ವಿದ್ವಾನ್ ವಿನಾಯಕ ಭಟ್ಟ ಶೇಡಿಮನೆ, ರವೀಂದ್ರ ಭಟ್ಟ ವೈದಿಕರಮನೆ, ಮಂಜುನಾಥ ಹೆಗಡೆ ಹಬ್ಬಣಮನೆ, ಶ್ರೀಧರ ಭಟ್ಟ ಅಣಲಗಾರ ಭಾಗವಹಿಸಲಿದ್ದಾರೆ ಎಂದು ಸಂಘಟಕರಾದ ತಿಮ್ಮಣ್ಣ ಭಟ್ಟ ಹಾಗೂ ದೀಪಕ ಭಟ್ಟ ಕುಂಕಿ ತಿಳಿಸಿದ್ದಾರೆ.







