ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೆವಿಜಿ ಬ್ಯಾಂಕ್ ನಲ್ಲಿ ಕಳ್ಳತನದ ಯತ್ನ ನಡೆಸಿದ ದರೋಡೆಕೋರರು, ಬ್ಯಾಂಕಿನ ದಾಖಲೆಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ.
ಬ್ಯಾಂಕ್ ನ ಕಿಟಕಿ ಮುರಿದು ಒಳನುಗ್ಗಿರುವುದು ಕಂಡು ಬಂದಿದೆ. ನಂತರ ಬೆಂಕಿ ಹಚ್ಚಿದ್ದು, ಇದರಿಂದ ಕಂಪ್ಯೂಟರ್ ಹಾಗೂ ದಾಖಲೆಗಳು ಸುಟ್ಟು ಕರಕಲಾಗಿದೆ.
ಕಳ್ಳತನವೇ ಇವರ ಉದ್ದೇಶವಾಗಿತ್ತೋ ಅಥವಾ ಬೆಂಕಿ ಹಚ್ಚುವುದೇ ಉದ್ದೇಶವಾಗಿತ್ತೊ ಎಂಬುದು ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ.
ಸ್ಥಳಕ್ಕೆ ಡಿ.ವೈ.ಎಸ್.ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಚುರುಕುಗೊಳಿಸಲು ಶ್ವಾನದಳ ಬರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.







