ಜಲ ಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ ವ್ಯಕ್ತಿಯೊಬ್ಬ 8.70 ಲಕ್ಷ ರೂ ವಂಚಿಸಿದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಂಧನೂರಿನ ಕೆಂಚಪ್ಪ ಗ್ಯಾನಪ್ಪ ಹಂಚಿನಾಳ ಎಂಬಾತ ಜಲಸಂಪನ್ಮೂಲ ಇಲಾಖೆಯಲ್ಲಿ ನೌಕರಿ ಕೊಡಿಸುವುದಾಗಿ ಹೇಳಿ, ಕಳಚೆಯ ಶ್ರೀನಾಥ ಶ್ರೀಕಾಂತ ಕಳಸ, ರವಿ ತಮ್ಮಣ್ಣ ಗೌಡ, ಪ್ರಭಾಕರ ವಿಶ್ವೇಶ್ವರ ಗೌಡ, ಮಾವಿನಮನೆಯ ಗೌರೀಶ ಮೋಹನ ಮರಾಠಾ, ಅರಬೈಲಿನ ಗಜಾನನ ಈಶ್ವರ ಪಟಗಾರ, ತಳಕೆಬೈಲಿನ ಶ್ವೇತಾ ಸುಭಾಸ ಮರಾಠಿ, ವಜ್ರಳ್ಳಿಯ ರಾಮಚಂದ್ರ ರಾಧಾಕೃಷ್ಣ ಕೊಡಕಣಿ ಇವರಿಗೆ ಮೋಸ ಮಾಡಿದ್ದಾನೆ.
ಕಳೆದ ವರ್ಷ ನವೆಂಬರ್ 3 ರಿಂದ ಮಾರ್ಚ 28 ರ ಅವಧಿಯಲ್ಲಿ ಈ ಎಲ್ಲರಿಂದ ಒಟ್ಟೂ 8,70,000ರೂ ಹಣ ಪಡೆದಿದ್ದು, ನೌಕರಿಯನ್ನಯ ಕೊಡಿಸಿಲ್ಲ, ಹಣವನ್ನೂ ಮರಳಿ ಕೊಟ್ಟಿಲ್ಲ. ಈ ಬಗ್ಗೆ ವಂಚನೆಗೊಳಗಾದವರು ಯಲ್ಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.







