ಯಲ್ಲಾಪುರದ ಅಂಬೇಡ್ಕರ್ ಭವನದಲ್ಲಿ
ಹರಳಯ್ಯ ಟ್ರಸ್ಟ್ ವತಿಯಿಂದ ಮಾನವ ಹಕ್ಕುಗಳ ದಿನ ಆಚರಿಸಲಾಯಿತು.
ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಪಾಟಣಕರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾನವ ಹಕ್ಕು ಆಯೋಗದ ತಾಲೂಕು ಅಧ್ಯಕ್ಷ ಜನಾರ್ದನ ಪಾಟಣಕರ್ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಝೋನ್ ಚೇರ್ ಪರ್ಸನ್ ಸುರೇಶ ಬೋರ್ಕರ್, ತೊಗಲು ಹರಳಯ್ಯ ಟ್ರಸ್ಟ್ ಅಧ್ಯಕ್ಷ ಜಗನ್ನಾಥ ರೇವಣಕರ್, ಪ್ರಮುಖರಾದ ಗಣೇಶ ಪಾಟಣಕರ್, ನಾಗೇಶ ಬೋವಿವಡ್ಡರ್, ನಿರಂಜನ ಪಾಟಣಕರ್, ಅನಿಲ್ ದೇಶಭಂಡಾರಿ, ಶಶಿಕಾಂತ ಪೈ ಭಾಗವಹಿಸಿದ್ದರು.
ಸ್ಮೀತಾ ಮೊರಸ್ಕರ್ ಸ್ವಾಗತಿಸಿದರು. ಮಾನವನ ಹಕ್ಕು ಆಯೋಗದ ತಾಲೂಕು ಕಾರ್ಯದರ್ಶಿ ಸಂತೋಷ್ ಪಾಟಣಕರ ನಿರ್ವಹಿಸಿದರು. ರೂಪಾ ಪಾಟಣಕರ ವಂದಿಸಿದರು.







