6
  • Latest
ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ

ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ

ಪ್ರಮೋದ ಮುತಾಲಿಕ್‌ ಅವರಿಗೆ ಹಾವೇರಿ ಜಿಲ್ಲೆ ಪ್ರವೇಶ ನಿರ್ಬಂಧ

ಪ್ರಮೋದ ಮುತಾಲಿಕ್‌ ಅವರಿಗೆ ಹಾವೇರಿ ಜಿಲ್ಲೆ ಪ್ರವೇಶ ನಿರ್ಬಂಧ

ADVERTISEMENT
  • Home
Saturday, August 29, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
ADVERTISEMENT
ADVERTISEMENT
Home ಸ್ಥಳೀಯ

ಮೌಢ್ಯ ದೂರವಾಗಿಸುವ ಭಕ್ತಿ ಸ್ಥಾನಗಳಾಗಲಿ ಮಂದಿರ

Kiran Reporter Haveri by Kiran Reporter Haveri
August 29, 2026
in ಸ್ಥಳೀಯ
advt advt advt
ADVERTISEMENT
ಹಾನಗಲ್ಲ: ಮಂದಿರಗಳು ಸಾಮರಸ್ಯದ ಕೇಂದ್ರಗಳಾಗಿ ಮೌಢ್ಯವನ್ನು ದೂರ ಮಾಡುವ ಭಕ್ತಿ ಸ್ಥಾನಗಳಾದರೆ ಮಾತ್ರ ಅವು ಸಮಾಜಕ್ಕೆ ಸಾರ್ಥಕತೆ ನೀಡಬಲ್ಲವು ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮೀಜಿ ನುಡಿದರು.
ಪಟ್ಟಣದಲ್ಲಿ ಗ್ರಾಮದೇವಿ ಶಿಲಾಮಂದಿರ ಉದ್ಘಾಟನೆ ನಿಮಿತ್ತ ಏರ್ಪಡಿಸಿದ್ದ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ಹಿಂದುಳಿದ ಶೋಷಿತ ದಲಿತ ಕುಟುಂಬಗಳು ಮೌಢ್ಯದಿಂದಲೇ ಆರ್ಥಿಕ, ಸಾಮಾಜಿಕವಾಗಿ ಹಾಳಾಗಿವೆ. ಶಿಕ್ಷಣಕ್ಕೆ ಒತ್ತು ನೀಡುವ ಬದಲು ಮೌಢ್ಯಾಚರಣೆಯಲ್ಲಿ ಮುಳುಗಿದ್ದರೆ ಅವರ ಬದುಕು ಹಸನಾಗಲು ಸಾಧ್ಯವಿಲ್ಲ. ದೇವಸ್ಥಾನದ ಗಂಟೆಯ ನಾದಕ್ಕಿಂತ ಶಾಲೆಯ ಗಂಟೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಶ್ರೀಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಮಾತನಾಡಿ, ದೇವಿ ಪುರಾಣವೆಂದರೆ ನಮ್ಮ ದೇಹದ ಪುರಾಣವೇ ಆಗಿದೆ. ನಮ್ಮಲ್ಲಿ ರಾಕ್ಷಸ ಗುಣಗಳಿಂದ ವಿಮುಕ್ತಿ ಹೊಂದಿ, ಅವಗುಣ ಅಹಂಗಳನ್ನು ಸಂಹಾರ ಮಾಡಿಕೊಂಡು, ಆಸೆ ಅತೃಪ್ತಿಯಿಂದ ಮುಕ್ತಿ ಪಡೆದು, ಅರಿವಿನ ದೇವರ ಪೂಜೆ ಮಾಡಿ ಬದುಕು ಅರಳಿಸಿಕೊಳ್ಳಬೇಕು ಎಂದರು.
ಹೊಸದುರ್ಗದ ಕುಂಚಿಟಿಗ ಮಹಾಸಂಸ್ಥಾನದ ಜಗದ್ಗುರು ಶಾಂತವೀರ ಮಹಾಸ್ವಾಮೀಜಿ, ಚಿತ್ರದುರ್ಗದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಜಗದ್ಗುರು ಮಾದಾರ ಚನ್ನಯ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.  ಅಧ್ಯಕ್ಷತೆ ಹಿಸಿ ಮಾತನಾಡಿದ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಶಿಲಾ ಮಂದಿರ ನಿರ್ಮಾಣಕ್ಕೆ ಭಕ್ತರು ದಾನ ದೇಣಿಗೆ ನೀಡಿಸಿದ್ದಾರೆ. ಇದು ಇಡೀ ಭಕ್ತ ಸಮೂಹದ ಯಶಸ್ಸು ಎಂದರು.
ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು, ಗುಂಡೂರಿನ ಸೇವಾಲಾಲ ಬಂಜಾರ ಗುರುಪೀಠದ ಶ್ರೀ ತಿಪ್ಪೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ದೇವಸ್ಥಾನ ಸಮಿತಿ ಪದಾಧಿಕಾರಿಗಳಾದ ಸುರೇಶ ಪೂಜಾರ, ಗಣೇಶ ಮೂಡ್ಲಿಯವರ, ರಾಜು ಗೌಳಿ, ಭೋಜರಾಜ ಕರೂದಿ, ಯಲ್ಲಪ್ಪ ಶೇರಖಾನೆ, ನಾಗೇಂದ್ರ ಬಂಕಾಪುರ, ಬಾಳಾರಾಮ ಗುರ್ಲಹೊಸೂರ, ವಿರೂಪಾಕ್ಷಪ್ಪ ಕಡಬಗೇರಿ, ಸಂಜಯ ಬೇದ್ರೆ, ನಾರಾಯಣ ಅಥಣಿ, ಈಶ್ವರ ವಾಲ್ಮೀಕಿ, ರವಿಚಂದ್ರ ಪುರೋಹಿತ, ಗುರುರಾಜ ನಿಂಗೋಜಿ, ರಾಮು ಯಳ್ಳೂರ, ಆದರ್ಶ ಶೆಟ್ಟಿ, ಕೃಷ್ಣ ಬಾಗಲೆ, ಕೀರ್ತಿ ಚಿನ್ನಮುಳಗುಂದ, ಸುನೀಲಕುಮಾರ ಅರ್ಕಸಾಲಿ, ಮಾಲತೇಶ ಕೊಲ್ಲಾಪೂರ, ಮನೋಜ ಕಲಾಲ ಅವರನ್ನು ಸನ್ಮಾನಿಲಾಯಿತು. ಸುನೀಲ ಅರ್ಕಸಾಲಿ ಕಾರ್ಯಕ್ರಮ ನಿರ್ವಹಿಸಿದರು.
ADVERTISEMENT
ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ದೇಗುಲದಲ್ಲಿ ಮೂತ್ರ ವಿಸರ್ಜನೆ; ಶಿಗ್ಗಾಂವ ಬಂದ್‌ಗೆ ವ್ಯಾಪಾರಸ್ಥರ ಬೆಂಬಲ

Next Post

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

Next Post
25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

25 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದ ವೃದ್ಧ ತಾಯಂದಿರು

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಜನಪರ ವರದಿಗಳಿಂದ ಮುನ್ನಡೆಯುತ್ತಿದೆ.

×

No WhatsApp Number Found!