6
  • Latest
ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ಜನಪರ ಕಾಳಜಿಯ ನಿಸ್ವಾರ್ಥ ನೌಕರರು ಇವರು!

AchyutKumar by AchyutKumar
in ಸ್ಥಳೀಯ
ಊರಿಗೆ ಬೆಳಕು ನೀಡುವ ಇವರ ಬದುಕು ಕತ್ತಲೆ

ಸಮುದ್ರದ ಅಲೆಗಳ ಏರಿಳತಕ್ಕೆ ನೀರು ನುಗ್ಗುವ `ಗಜನಿ ಭೂಮಿ’ಯಲ್ಲಿಯಲ್ಲಿ ಕಾಲುಡುವುದೇ ಅಪಾಯ. ಅಂಥಹುದರಲ್ಲಿ ಹೆಸ್ಕಾಂ ಸಿಬ್ಬಂದಿ ಗೋಕರ್ಣದಿಂದ ಬರ್ಗಿವರೆಗೆ ಸಂಪರ್ಕ ಸಾಧಿಸುವ 11 ಕೆವಿ ಗಾತ್ರದ 2 ಕಂಬಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿ ಸಾಹಸ ಮಾಡಿದ್ದಾರೆ.
ಒಬ್ಬರಂತೂ ಗಜನಿಯ ಭೂಮಿಯ ರಾಡಿಯಲ್ಲಿ ಕುತ್ತಿಗೆಯವರೆಗೆ ಮುಳುಗಿದ್ದರು. ಹಾವು – ಚೇಳುಗಳು ಅವರ ಸಮೀಪದಿಂದಲೇ ಓಡಾಡುತ್ತಿದ್ದವು. ಕುರಚಲು ಗಿಡದ ಮುಳ್ಳುಗಳು ಅವರ ಮೈ ತೆರಚುತ್ತಿದ್ದವು. ಆದರೂ, ಅವರಲ್ಲಿನ ಧೈರ್ಯ ಕಡಿಮೆಯಾಗಿರಲಿಲ್ಲ. ಅಗೆದಷ್ಟು ಆಳಕ್ಕೆ ಹೋಗುತ್ತಿದ್ದರೂ ತಮ್ಮ ಕೆಲಸದಲ್ಲಿನ ಶ್ರದ್ಧೆ ಕಡಿಮೆ ಆಗಿರಲಿಲ್ಲ. ಅಗೆದ ಹಾಗೇ ನೀರು ಬಂದರೂ ಬೇಸರಿಸಿಕೊಳ್ಳದೇ ಮತ್ತೆ ಮತ್ತೆ ಅಗೆಯುತ್ತಿದ್ದರು. ಮಾದನಗೇರಿಯ ಗಜನಿ ಪ್ರದೇಶದಲ್ಲಿ ಗಟ್ಟಿನೆಲ ಬರುವವರೆಗೂ ಅವರು ಮಣ್ಣಿನ ರಾಡಿ ತೆಗೆದರು. ನಂತರ ಗಟ್ಟಿಯಾದ ಭೂಮಿಯಲ್ಲಿಯೂ 1.5ಮೀ ಆಳ ಅಗೆದರು. ಹೆಸ್ಕಾಂ ನೌಕರ ವೆಂಕಟೇಶ್ ಗೌಡ ತಮ್ಮದೇ ತಂಡ ಕಟ್ಟಿಕೊಂಡು ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದರು.
ಆಳೆತ್ತರಕ್ಕೆ ಹೂಳು ತುಂಬಿದ್ದ ಅಲ್ಲಿ ಸ್ವಲ್ಪ ಆಯತಪ್ಪಿದ್ದರೂ ಅವರಾರೂ ಹೊರ ಬರುತ್ತಿರಲಿಲ್ಲ. ಸಾಕಷ್ಟು ಸಿದ್ಧತೆಯೊಂದಿಗೆ ಕೆಸರಿಗೆ ಇಳಿದ ಅವರು ಗಾಳಿ-ಮಳೆ ಲೆಕ್ಕಿಸದೇ ಜನರಿಗೆ ಬೆಳಕು ನೀಡಿದರು. ಗಟ್ಟಿನೆಲ ಬರುವವರೆಗೆ ರಾಡಿ ತೆಗೆದು, ಗಟ್ಟಿ ನೆಲದಲ್ಲಿ ಮತ್ತೆ ಅಗೆದು ಅದರ ಒಳಗೆ ಕಂಬ ನಿಲ್ಲಿಸುವ ಸಾಹಸ ದೊಡ್ಡ ಸಾಧನೆಯೇ ಸರಿ. ವಿದ್ಯುತ್ ಕಡಿತವಾದ 24 ಗಂಟೆಯ ಒಳಗಾಗಿ ಪ್ರತಿ ಮನೆಯಲ್ಲಿಯೂ ಬೆಳಕು ಮೂಡಿಸಬೇಕು ಎಂದು ಅವರು ಶಪಥ ಮಾಡಿದ್ದರು. ಅದನ್ನು ಸಾಧಿಸಿಯೂ ತೋರಿಸಿದರು. `ಈ ಹೆಸ್ಕಾಂ ಅಧಿಕಾರಿ-ಸಿಬ್ಬಂದಿಗೆ ಮಾಡಲು ಬೇರೆ ಕೆಲಸ ಇಲ್ಲ. ಪದೇ ಪದೇ ಕರೆಂಟ್ ತೆಗೆಯುತ್ತಾರೆ’ ಎಂದು ದೂರುವವರೇ ಹೆಚ್ಚು. ಆದರೆ, 24*7 ಸಹಾಯವಾಣಿಗೆ ದಾಖಲಾದ ಯಾವ ದೂರನ್ನು ಅವರು ದೂರ ಮಾಡಿಲ್ಲ.

ADVERTISEMENT

 

Advertisement. Scroll to continue reading.
Advertisement. Scroll to continue reading.
Previous Post

ತಂದೆ ಮಾರಿದ ಭೂಮಿ ಕಬಳಿಸಿದ ಮಕ್ಕಳು

Next Post

ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

Next Post
ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

ಜನ ಜಾಗೃತಿಗಾಗಿ ದಿನವಿಡೀ ದುಡಿಯುವ ಏಕಾಂಗಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ