6
  • Latest

ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…

`ಹಿಟ್ ಆಂಡ್ ರನ್' ಪ್ರಕರಣಕ್ಕೂ ಸಿಗಲಿದೆ ಪರಿಹಾರ

AchyutKumar by AchyutKumar
in ರಾಜ್ಯ

ನಿಮ್ಮ ಪರಿಚಯದಲ್ಲಿ ಯಾರಾದರೂ ರಸ್ತೆ ಅಪಘಾತದಿಂದ ನೊಂದಿದ್ದಾರಾ? ಹಾಗಾದರೆ, ಅಂಥವರ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ ಸೂಕ್ತ ಪರಿಹಾರ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಹಾಗೂ ಸಾವನಪ್ಪಿದ ವ್ಯಕ್ತಿಯ ವಾರಸುದರರಿಗೆ 2 ಲಕ್ಷ ರೂ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಹೊರಡಿಸಿದೆ.
ದೇಶದಲ್ಲಿ ಪ್ರತಿವರ್ಷ 60 ಸಾವಿರಕ್ಕೂ ಅಧಿಕ `ಹಿಟ್ ಅಂಡ್ ರನ್’ ಅಪಘಾತ ನಡೆಯುತ್ತಿದೆ. ಆದರೆ, ಇಂಥ ಪ್ರಕರಣದಲ್ಲಿ ಪರಿಹಾರ ಪಡೆದವರು 300 ಜನ ಮಾತ್ರ. ಕಾರಣ ಬಹುತೇಕ ಜಿಲ್ಲೆಗಳಲ್ಲಿ ಈ ಪರಿಹಾರ ಪಾವತಿ ಕುರಿತಂತೆ ಪರಿಶೀಲನೆ ನಡೆಸಬೇಕಾದ ಸಮಿತಿಯೇ ಇಲ್ಲ!
ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೀಗಾಗಿಲ್ಲ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಆಗಾಗ ಸಭೆ ಸೇರಿ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಡೆಸಿ, ಅರ್ಹ ಪ್ರಕರಣಗಳಿಗೆ ಪರಿಹಾರ ಪಾವತಿಗೆ ಈ ಸಮಿತಿ ಶಿಫಾರಸ್ಸು ಮಾಡುತ್ತಿದೆ.
ವಾಹನ ಅಪಘಾತವಾದರೆ ಅಪಘಾತಪಡಿಸಿದ ವಾಹನ ಮತ್ತು ಅಪಘಾತವಾದ ವಾಹನದ ವಿಮಾ ಮೊತ್ತದಿಂದ ನಷ್ಟ ಹೊಂದಿದವರಿಗೆ ಪರಿಹಾರ ಬರುವುದು ಎಲ್ಲರಿಗೂ ಗೊತ್ತು. ಆದರೆ, ಅಪರಿಚಿತ ವಾಹನಗಳ ಅಪಘಾತದಿಂದ ಆದ ನಷ್ಟಕ್ಕೂ ಪರಿಹಾರ ಸಿಗುವುದು ಅನೇಕರಿಗೆ ತಿಳಿದಿಲ್ಲ. ಯಾವ ವಾಹನ ಎಂದು ಗೊತ್ತಿಲ್ಲದೇ ನಡೆದ ಅಪಘಾತದಿಮದ ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರೂ ಸರ್ಕಾರ ಪರಿಹಾರ ಕೊಡುತ್ತದೆ.
ಏನು ಮಾಡಬೇಕು?
ಅಪಘಾತ ಗಂಭೀರ ಗಾಯಗೊಂಡ ವ್ಯಕ್ತಿ ಅಥವಾ ಮೃತನ ವಾರೀಸುದಾರರು ಅಪಘಾತ ನಡೆದ ಸ್ಥಳ ವ್ಯಾಪ್ತಿಯ ತಹಸೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪರಿಹಾರ ಕೋರುವ ಮನವಿಯ ಅರ್ಜಿ ಸಲ್ಲಿಸಬೇಕು. ಅಪಘಾತದ ವರದಿ ಮತ್ತು ಮರಣೋತ್ತರ ವರದಿ ಜೊತೆ ಅಗತ್ಯ ಗುರುತಿನ ಪತ್ರ ಒದಗಿಸಬೇಕು. ನಂತರ ಜಿಲ್ಲಾಧಿಕಾರಿಗಳು ವಿಮಾ ಕಂಪನಿಗೆ ಪರಿಹಾರ ಪಾವತಿಸುವಂತೆ ಆದೇಶಿಸುತ್ತಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

Next Post

ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ

Next Post

ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ