6
  • Latest

ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅಪಘಾತದಿಂದ ನೊಂದವರಿಗೆ ಇಲ್ಲಿದೆ ತುಸು ಸಮಾಧಾನದ ಸುದ್ದಿ…

`ಹಿಟ್ ಆಂಡ್ ರನ್' ಪ್ರಕರಣಕ್ಕೂ ಸಿಗಲಿದೆ ಪರಿಹಾರ

AchyutKumar by AchyutKumar
July 1, 2024
in ರಾಜ್ಯ
advt advt advt
ADVERTISEMENT

ನಿಮ್ಮ ಪರಿಚಯದಲ್ಲಿ ಯಾರಾದರೂ ರಸ್ತೆ ಅಪಘಾತದಿಂದ ನೊಂದಿದ್ದಾರಾ? ಹಾಗಾದರೆ, ಅಂಥವರ ಕುಟುಂಬಕ್ಕೆ ಸರ್ಕಾರದಿಂದ ಸಿಗಲಿದೆ ಸೂಕ್ತ ಪರಿಹಾರ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮೋಟಾರು ವಾಹನಗಳ ಕಾಯಿದೆ ಪ್ರಕಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡವರಿಗೆ 50 ಸಾವಿರ ರೂ ಹಾಗೂ ಸಾವನಪ್ಪಿದ ವ್ಯಕ್ತಿಯ ವಾರಸುದರರಿಗೆ 2 ಲಕ್ಷ ರೂ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸುತ್ತೋಲೆ ಹೊರಡಿಸಿದೆ.
ದೇಶದಲ್ಲಿ ಪ್ರತಿವರ್ಷ 60 ಸಾವಿರಕ್ಕೂ ಅಧಿಕ `ಹಿಟ್ ಅಂಡ್ ರನ್’ ಅಪಘಾತ ನಡೆಯುತ್ತಿದೆ. ಆದರೆ, ಇಂಥ ಪ್ರಕರಣದಲ್ಲಿ ಪರಿಹಾರ ಪಡೆದವರು 300 ಜನ ಮಾತ್ರ. ಕಾರಣ ಬಹುತೇಕ ಜಿಲ್ಲೆಗಳಲ್ಲಿ ಈ ಪರಿಹಾರ ಪಾವತಿ ಕುರಿತಂತೆ ಪರಿಶೀಲನೆ ನಡೆಸಬೇಕಾದ ಸಮಿತಿಯೇ ಇಲ್ಲ!
ಆದರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹೀಗಾಗಿಲ್ಲ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಆಗಾಗ ಸಭೆ ಸೇರಿ ಪರಿಹಾರ ಕೋರಿ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ನಡೆಸಿ, ಅರ್ಹ ಪ್ರಕರಣಗಳಿಗೆ ಪರಿಹಾರ ಪಾವತಿಗೆ ಈ ಸಮಿತಿ ಶಿಫಾರಸ್ಸು ಮಾಡುತ್ತಿದೆ.
ವಾಹನ ಅಪಘಾತವಾದರೆ ಅಪಘಾತಪಡಿಸಿದ ವಾಹನ ಮತ್ತು ಅಪಘಾತವಾದ ವಾಹನದ ವಿಮಾ ಮೊತ್ತದಿಂದ ನಷ್ಟ ಹೊಂದಿದವರಿಗೆ ಪರಿಹಾರ ಬರುವುದು ಎಲ್ಲರಿಗೂ ಗೊತ್ತು. ಆದರೆ, ಅಪರಿಚಿತ ವಾಹನಗಳ ಅಪಘಾತದಿಂದ ಆದ ನಷ್ಟಕ್ಕೂ ಪರಿಹಾರ ಸಿಗುವುದು ಅನೇಕರಿಗೆ ತಿಳಿದಿಲ್ಲ. ಯಾವ ವಾಹನ ಎಂದು ಗೊತ್ತಿಲ್ಲದೇ ನಡೆದ ಅಪಘಾತದಿಮದ ಗಂಭೀರ ಗಾಯಗೊಂಡ ಅಥವಾ ಮೃತಪಟ್ಟವರ ವಾರಿಸುದಾರರೂ ಸರ್ಕಾರ ಪರಿಹಾರ ಕೊಡುತ್ತದೆ.
ಏನು ಮಾಡಬೇಕು?
ಅಪಘಾತ ಗಂಭೀರ ಗಾಯಗೊಂಡ ವ್ಯಕ್ತಿ ಅಥವಾ ಮೃತನ ವಾರೀಸುದಾರರು ಅಪಘಾತ ನಡೆದ ಸ್ಥಳ ವ್ಯಾಪ್ತಿಯ ತಹಸೀಲ್ದಾರ್ ಅಥವಾ ಉಪ ವಿಭಾಗಾಧಿಕಾರಿಗಳಿಗೆ ಪರಿಹಾರ ಕೋರುವ ಮನವಿಯ ಅರ್ಜಿ ಸಲ್ಲಿಸಬೇಕು. ಅಪಘಾತದ ವರದಿ ಮತ್ತು ಮರಣೋತ್ತರ ವರದಿ ಜೊತೆ ಅಗತ್ಯ ಗುರುತಿನ ಪತ್ರ ಒದಗಿಸಬೇಕು. ನಂತರ ಜಿಲ್ಲಾಧಿಕಾರಿಗಳು ವಿಮಾ ಕಂಪನಿಗೆ ಪರಿಹಾರ ಪಾವತಿಸುವಂತೆ ಆದೇಶಿಸುತ್ತಾರೆ.

ADVERTISEMENT
ADVERTISEMENT
Advertisement. Scroll to continue reading.
Advertisement. Scroll to continue reading.
ShareSendTweetShare
ADVERTISEMENT
Previous Post

ತಂದೆ ಶಿಕ್ಷಕರಾಗಿದ್ದ ಶಾಲೆಗೆ ಮಗನ ಕೊಡುಗೆ ಅಪಾರ!

Next Post

ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ

Next Post

ಸೋಮಾರಿಗಳನ್ನು ಬಡಿದೆಬ್ಬಿಸಿದ ಹಿರಿಯ ಶಾಸಕ

ದುಬಾರಿಯಾದ ಹಾಲು: ಶಿರಸಿ ಬಿಜೆಪಿಗರಿಂದ ಆಕ್ರೋಶ

ಕಾಲೇಜು ಅಭಿವೃದ್ಧಿಗೆ ಅಧ್ಯಕ್ಷನೇ ಅಡ್ಡಿ: ಪ್ರಾಚಾರ್ಯ ಆರೋಪ

Discussion about this post

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.