6
  • Latest

50ಕ್ಕೂ ಅಧಿಕ ಕಲಾವಿದರ ಸಮಾಗಮ: ಮಾದರಿಯಾದ ಮಾಗೋಡಿನ ಕಲಾ ಆರಾಧನೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

50ಕ್ಕೂ ಅಧಿಕ ಕಲಾವಿದರ ಸಮಾಗಮ: ಮಾದರಿಯಾದ ಮಾಗೋಡಿನ ಕಲಾ ಆರಾಧನೆ!

AchyutKumar by AchyutKumar
in ಸ್ಥಳೀಯ

ಹವ್ಯಾಸಿ ಕಲಾವಿದರ ಪಾರುಪತ್ಯ | ಪ್ರಸಂಗ ಪಂಚಕಕ್ಕೆ ದಿನಗಣನೆ | ಸಹಬಾಳ್ವೆಗೆ ವೀರಾಂಜಿನೇಯನ ಸಹಕಾರ

ಯಲ್ಲಾಪುರ: ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಆಷಾಢ ಏಕಾದಶಿಯಂದು ಎರಡನೇ ವರ್ಷದ ಪ್ರಸಂಗ ಪಂಚಕ ಕಾರ್ಯಕ್ರಮ ಸಂಘಟನೆಗೆ ಸಜ್ಜುಗೊಂಡಿದೆ. ಈ ಬಾರಿ ಜುಲೈ 17ರಂದು ಸಂಜೆ 6ರಿಂದ ಬೆಳಗ್ಗೆ 6ರವರೆಗೆ ನಿರಂತರವಾಗಿ ತಾಳಮದ್ದಲೆಯ ಮೂಲಕ ಆಷಾಢ ಏಕಾದಶಿಯ ಪರ್ವಕಾಲದಲ್ಲಿ ಕಲಾರಾಧನೆ ನಡೆಯಲಿದೆ.

ADVERTISEMENT

ಸ್ಥಳೀಯ ಹವ್ಯಾಸಿ ಕಲಾವಿದರೆಲ್ಲರೂ ಒಗ್ಗಟ್ಟಿನಿಂದ ಸೇರಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಮೂಲಕ ಕಲಾ ಸೇವೆ ಮಾಡುತ್ತಿದ್ದಾರೆ. ಪ್ರತಿ ಏಕಾದಶಿಯ ದಿನ ಮಾಗೋಡಿನ ವೀರಮಾರುತಿಯ ಸನ್ನಿಧಿಯಲ್ಲಿ ತಾಳಮದ್ದಲೆ ನಡೆಯುತ್ತದೆ. ಈ ತಂಡ ತಾಲೂಕಿನ ವಿವಿಧ ಕಡೆ ತಾಳಮದ್ದಲೆ ನಡೆಸಿದ್ದು, ಕಳೆದ ವರ್ಷದಿಂದ ಆಷಾಢ ಏಕಾದಶಿಯ ದಿನ `ಪ್ರಸಂಗ ಪಂಚಕ’ ಎಂಬ ವಿಶಿಷ್ಟ ಕಾರ್ಯಕ್ರಮದ ಮೂಲಕ ಕಲಾ ಆರಾಧನೆ ನಡೆಯುತ್ತಿದೆ. ಈ ಬಾರಿ `ಕಚ-ದೇವಯಾನಿ, ಪಾದುಕಾ ಪ್ರದಾನ, ರುಕ್ಮಿಣಿ ಕಲ್ಯಾಣ, ಬಬ್ರುವಾಹನ ಹಾಗೂ ಮೀನಾಕ್ಷಿ ಕಲ್ಯಾಣ’ ತಾಳಮದ್ದಲೆಗಳು ನಡೆಯಲಿವೆ. ಸ್ಥಳೀಯ ಹಾಗೂ ಸುತ್ತಮುತ್ತಲಿನ 50ಕ್ಕೂ ಹೆಚ್ಚು ಕಲಾವಿದರು ಈ ಸೇವೆಯಲ್ಲಿ ಭಾಗವಹಿಸಲಿದ್ದಾರೆ. ಆಷಾಢ ಏಕಾದಶಿಯ ಪರ್ವಕಾಲದಲ್ಲಿ ದೇವರ ಸನ್ನಿಧಿಯಲ್ಲಿ ಕಲಾಭಿಮಾನಿಗಳಿಗೆ ನಿರಂತರವಾಗಿ ಲಘು ಉಪಾಹಾರ, ಪಾನೀಯ ವ್ಯವಸ್ಥೆ ನೀಡಿ ಪ್ರದರ್ಶನ ನೀಡುವುದು ಈ ಸಂಘಟನೆಯ ಮುಖ್ಯ ಉದ್ದೇಶ.

ಕಳೆದ ವರ್ಷ ಆಷಾಢ ಏಕಾದಶಿಯಂದು ಹೊಸ ಕಲ್ಪನೆಯೊಂದಿಗೆ ಆರಂಭವಾದ ಪ್ರಸಂಗ ಪಂಚಕ ಕಾರ್ಯಕ್ರಮ ಅಪಾರ ಮೆಚ್ಚುಗೆಗಳಿಸಿತ್ತು. ಮಾಗೋಡ ಸುತ್ತಮುತ್ತಲಿನ 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿ ನಿರಂತರ 12 ತಾಸುಗಳ ತಾಳಮದ್ದಲೆಯನ್ನು ಯಶಸ್ವಿಗೊಳಿಸಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಸಮಯ ಪಾಲನೆ ಪ್ರಸಂಗ ಪಂಚಕದ ವೈಶಿಷ್ಟ್ಯ. ನಿಗದಿತ ಸಮಯಕ್ಕೆ ಆರಂಭವಾಗಿ, ನಿಗದಿತ ಸಮಯಕ್ಕೆ ಕಾರ್ಯಕ್ರಮ ಮುಕ್ತಾಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಪ್ರತಿ ಪ್ರಸಂಗಕ್ಕೂ ನಿರ್ದಿಷ್ಟ ಸಮಯ, ಅದೇ ಸಮಯಕ್ಕೆ ಸರಿಯಾಗಿ ಪ್ರಸಂಗ ಪೂರ್ಣಗೊಳಿಸುವುದು, ಅದಕ್ಕೆ ಅಗತ್ಯ ಸಿದ್ಧತೆಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ನಡೆಸುವ ಈ ಸಂಘಟನೆ ಇತರರಿಗೆ ಮಾದರಿಯಾಗಿದೆ.
ಕೂಟದ ಅಧ್ಯಕ್ಷ ನಾರಾಯಣ ಭಟ್ಟ ಮೊಟ್ಟೆಪಾಲ, ಸಂಚಾಲಕ ನರಸಿಂಹ ಭಟ್ಟ ಕುಂಕಿಮನೆ, ಭಾಗವತ ಮಹಾಬಲೇಶ್ವರ ಭಟ್ಟ ಬೆಳಶೇರ ಅವರ ನೇತೃತ್ವದಲ್ಲಿ ಕೂಟದ ಕಲಾವಿದರು ಸಂಘಟನೆಯಲ್ಲಿ ನಿರತರಾಗಿದ್ದಾರೆ.

Advertisement. Scroll to continue reading.
– ಶ್ರೀಧರ ವೈದಿಕ
Advertisement. Scroll to continue reading.
Previous Post

ಶುಕ್ರವಾರದ ಸಿನಿಮಾ ಮಾತು..

Next Post

ಹುಲಿ ಬಂತು ಹುಲಿ!

Next Post

ಹುಲಿ ಬಂತು ಹುಲಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ