ಶಿರಸಿ: ನೈಸರ್ಗಿಕವಾಗಿ ಹುಟ್ಟಿಕೊಂಡ ಹಳ್ಳ ಕೊಳ್ಳಗಳ್ಳಗಳಿಗೆ ಕಸಕಡ್ಡಿಗಳು ಸಿಲುಕಿ ನೀರಿನ ದಿಕ್ಕು ಬದಲಿಸಿದ್ದು, ಮಳೆಗಾಲದಲ್ಲಿ ನರೆಗಾದಿಂದ ಕಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದೆ.
ಶಿರಸಿ ತಾಲೂಕಿನ ಹುಣಸೆಕೊಪ್ಪ ಗ್ರಾಮ ಪಂಚಾಯತ್ನ ಹನುಮಂತಿ ಗ್ರಾಮದಲ್ಲಿ 2ಲಕ್ಷ ವೆಚ್ಚದಲ್ಲಿ ಕಾಲುವೆ ನಿರ್ಮಿಸಲಾಗಿದೆ. ಇಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕಾಲುವೆಗಳನ್ನು ನಿರ್ಮಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ. ಈ ಕಾಲುವೆ ವಿಸ್ತೀರ್ಣ ಸುಮಾರು 1ಕೀ.ಮೀ ಹೆಚ್ಚಿನ ವ್ಯಾಪ್ತಿ ಹೊಂದಿದ್ದು ಬೆಟ್ಟಗುಡ್ಡಗಳಿಂದ ಹರಿದು ಬರುವ ನೀರು ನದಿಗೆ ಸಂಪರ್ಕ ಕಲ್ಪಿಸಲು ಅನುಕೂಲವಾಗಿದೆ. ಕಾಲುವೆ ನಿರ್ಮಾಣದಿಂದಾಗಿ ನೀರು ಸರಾಗವಾಗಿ ನದಿ ಕೋಡಿಯನ್ನು ಸೇರುತ್ತಿದೆ. ಸುತ್ತಲಿನ ಕೂಲಿಕಾರರಿಗೆ ಉದ್ಯೋಗ ಸೃಷ್ಟಿ. ಕೆರೆಯ ನೀರು ಕಲುಷಿತವಾಗದಂತೆ ತಡೆಯಲು ಸಹಾಯಕವಾಗಿದೆ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕಲ್ಲಪ್ಪ ತಿಳಿಸಿದರು.





Discussion about this post