ಕಾರವಾರ: `ಶಿರೂರು ಗುಡ್ಡ ಕುಸಿತದ ಸ್ಥಳದಲ್ಲಿ ತಡೆಗೋಡೆ ಹಾಕಿದ್ದರೆ ಇಷ್ಟೊಂದು ದೊಡ್ಡ ದುರಂತ ನಡೆಯುತ್ತಿರಲಿಲ್ಲ’ ಎಂದು ಶಾಸಕ ಸತೀಶ್ ಸೈಲ್ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಘಟನೆ ನಡೆದ ಸ್ಥಳದ ಪಕ್ಕದಲ್ಲಿಯೇ 30 ವರ್ಷಗಳ ಹಿಂದೆ ತೆರವು ಮಾಡಿದ್ದ ಗುಡ್ಡಕ್ಕೆ ತಡೆಗೋಡೆ ಹಾಕಲಾಗಿದೆ. ಆದರೆ, ಆ ಸ್ಥಳದಲ್ಲಿ ಯಾವ ಕುಸಿತ ಆಗಿಲ್ಲ. ಈಗ ಅವೈಜ್ಞಾನಿಕ ಕೆಲಸಕ್ಕೆ ಹತ್ತು ಜನ ಸಾವನಪ್ಪಿದ್ದಾರೆ’ ಎಂದರು.
`ಭಾರತ್ ಬೆಂಜ್ ಲಾರಿಯಲ್ಲಿ ಕ್ಲೋಸ್ ಮಾಡಿ ಕುಳಿತರೆ ಆರು ದಿನ ಬದುಕಬಹುದು ಎನ್ನುವ ವಿಚಾರ ತಿಳಿಸಿದ್ದರು. ಈ ಕಾರಣದಿಂದ ನಿರಂತರ ಹುಡುಕಾಟ ನಡೆದಿದೆ. ಶಿರೂರು ಸೂಕ್ಷ್ಮ ಸ್ಥಳ ಎಂದು ವರದಿ ನೀಡಿದ್ದರು ನಿರ್ಲಕ್ಷ ಮಾಡಲಾಗಿದೆ’ ಎಂದು ದೂರಿದರು.





Discussion about this post