ಗಂಗಾವಳಿ ನದಿ ಆಳದಲ್ಲಿನ ಮಣ್ಣಿನ ಅಡಿ ಅರ್ಜುನ ಓಡಿಸುತ್ತಿದ್ದ ಲಾರಿ ಸಿಲುಕಿಕೊಂಡಿದೆ. ಲಾರಿ ಇರುವ ಸ್ಥಳ ಖಚಿತವಾಗಿದ್ದು, ಗುರುವಾರ ಅದನ್ನು ಹೊರ ತೆಗೆಯುವ ಪ್ರಯತ್ನ ನಡೆಯಲಿದೆ.
ಈ ಭಾಗದ ಕಾರ್ಯಚರಣೆಗೆ ರೆಡಾರ್ ಹಾಗೂ ಇನ್ನಿತರ ಉಪಕರಣಗಳನ್ನು ಬಳಸುವುದು ಅನಿವಾರ್ಯವಾಗಿದ್ದು, ಸಾರ್ವಜನಿಕರ ಮೊಬೈಲ್ ಸಿಗ್ನಲ್ ಈ ಕಾರ್ಯಾಚರಣೆಗೆ ಅಡ್ಡಿಯಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಶಿರೂರು ಭಾಗದಲ್ಲಿ ಮೊಬೈಲ್ ನಿಷೇಧಿಸಲಾಗಿದ್ದು, ಸಾರ್ವಜನಿಕರ ಓಡಾಟಕ್ಕೆ ಸಹ ಜಿಲ್ಲಾಡಳಿತ ತಡೆ ಒಡ್ಡಿದೆ.





Discussion about this post