ಸಿದ್ದಾಪುರ: ಗಾಳಿ-ಮಳೆ ಕಾರಣದಿಂದ ರಸ್ತೆ ಮೇಲೆ ಮರ ಬೀಳುತ್ತಿದ್ದು, ಸಂಚಾರ ಸುಗಮಕ್ಕೆ ಮರ ಕಟಾವು ಮಾಡಿದ ನಾಟಾ ಮತ್ತೆ ರಸ್ತೆಗೆ ಬರುತ್ತಿದೆ. ಈ ನಾಟಾ ಜನರ ಓಡಾಟಕ್ಕೆ ಕಾಟ ಕೊಡುತ್ತಿದೆ.
ಲೋಕೋಪಯೋಗಿ, ಅರಣ್ಯ ಹಾಗೂ ಹೆಸ್ಕಾಂ ಸೇರಿ ಇದನ್ನು ತೆರವು ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆಯ ಮಾದಲಮನೆ ಬಸ್ ನಿಲ್ದಾಣದ ಸಮೀಪ ವಿದ್ಯುತ್ ತಂತಿ ಮೇಲೆ ಕಾಡು ಜಾತಿಯ ಮರ ಬಿದ್ದಿದ್ದು, ಮರ ತೆರವು ಮಾಡಿದ ನಂತರ ನಾಟಾ ಅಲ್ಲೇ ಬಿಡಲಾಗಿದೆ ಎಂದು ಮಾದಲಮನೆ ಗ್ರಾಮದ ಮಂಜುನಾಥಗೌಡ, ಭಾಸ್ಕರಗೌಡ, ಕೊಳಗಿಜಯ ದಿನೇಶ ಹೆಗಡೆ ದೂರಿದರು.






Discussion about this post