6
  • Latest
ಪುಣ್ಯ ಹಾಗೂ ಪ್ರಸಿದ್ಧ ತಾಣ ಕವಡಿಕೆರೆ

ಪುಣ್ಯ ಹಾಗೂ ಪ್ರಸಿದ್ಧ ತಾಣ ಕವಡಿಕೆರೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಪುಣ್ಯ ಹಾಗೂ ಪ್ರಸಿದ್ಧ ತಾಣ ಕವಡಿಕೆರೆ

AchyutKumar by AchyutKumar
in ಲೇಖನ
ಪುಣ್ಯ ಹಾಗೂ ಪ್ರಸಿದ್ಧ ತಾಣ ಕವಡಿಕೆರೆ

ಗಗನದ ಸ್ಪರ್ಶಕ್ಕೆ ಕಾದು ನಿಂತoತಿರುವ ಬೆಟ್ಟ-ಗುಡ್ಡಗಳು, ರಭಸದಿಂದ ಧುಮುಕಿ ಶಾಂತವಾಗಿ ಸಾಗುವ ಜಲಪಾತಗಳು, ಸದ್ದಿಲ್ಲದೇ ತಮ್ಮ ಪಾಡಿಗೆ ಹರಿದು ನೆಲಕ್ಕೆ ತಂಪೆರೆಯುತ್ತಿರುವ ಹೆಸರಿಲ್ಲದ ನೂರಾರು ತೊರೆಗಳು, ವಿಶಾಲವಾಗಿ ಹರಡಿ ಅಸಂಖ್ಯ ಜೀವಸಂಕುಲಗಳಿಗೆ ಮನೆಯಾಗಿರುವ ಕೆರೆಗಳು.. ಹೀಗೆ ಈ ವನ ಶ್ರೀಮಂತಿಕೆಯ ಖಜಾನೆಯಲ್ಲಿ ಎಣಿಸಿದರೂ ಮುಗಿಯದಷ್ಟು ಸಂಪತ್ತಿನ ರಾಶಿ ಯಲ್ಲಾಪುರದಲ್ಲಿದೆ.
ಇತಿಹಾಸದ ಕಥೆಯನ್ನು ಸಾರಿ ಹೇಳುತ್ತಿರುವ ಪ್ರಾಚೀನ ದೇವಾಲಯಗಳು,ಶಾಸನಗಳೂ ಆ ರಾಶಿಯಲ್ಲಿ ಸೇರಿಕೊಂಡಿವೆ. ಪ್ರವಾಸಿಗರ ಕಣ್ಣಿಗೆ ಸ್ವರ್ಗದಂತೆ ಕಂಗೊಳಿಸುವ ನಿಸರ್ಗ ಸಿರಿಯೇ ಇಲ್ಲಿದೆ. ಇವುಗಳ ನಡುವೆ ಪ್ರವಾಸೀ ತಾಣವಾಗಿಯೂ,ಪವಿತ್ರ ಕ್ಷೇತ್ರವಾಗಿಯೂ ತನ್ನೆಡೆ ಜನರನ್ನು ಸೆಳೆಯುತ್ತಿರುವ ಪ್ರದೇಶ ಕವಡಿಕೆರೆ. ಮಾಗೋಡು ಮಾರ್ಗದಲ್ಲಿ 6 ಕಿ.ಮೀ ಸಾಗಿದರೆ ವಿಶಾಲವಾದ ಈ ಕವಡಿಕೆರೆ ಸಿಗುತ್ತದೆ. ಸುಮಾರು 62 ಎಕರೆಗಳಷ್ಟು ವಿಸ್ತೀರ್ಣ ಹೊಂದಿರುವ ಈ ಐತಿಹಾಸಿಕ ಕೆರೆಯ ದಡದಲ್ಲಿ ದುರ್ಗಾಂಬಿಕಾ ದೇವಾಲಯವಿದೆ. ಈ ಕೆರೆ ಹಾಗೂ ದೇವಾಲಯಗಳ ಕುರಿತು ಇತಿಹಾಸ 2-3 ಬಗೆಯ ಕಥೆಗಳನ್ನು ಹೇಳುತ್ತದೆ. `ಪಾಂಡವರು ವನವಾಸದಲ್ಲಿದ್ದ ಸಂದರ್ಭದಲ್ಲಿ,ಈ ಪ್ರದೇಶದಲ್ಲಿ ಹಾದು ಹೋಗುತ್ತಿರುವಾಗ ಅವರ ಪತ್ನಿ ದ್ರೌಪದಿಗೆ ಬಾಯಾರಿಕೆಯಾಯಿತು. ಅವಳು ಭೀಮನನ್ನು ನೀರು ತರುವಂತೆ ಕೇಳಿದಳು. ಎಷ್ಟು ಅಲೆದರೂ ನೀರು ಸಿಗದಿದ್ದಾಗ ಭೀಮ ದೇವಿಯನ್ನು ಪ್ರಾರ್ಥಿಸಿದ. ದೇವಿಯು ಗಂಗಾನದಿಯ ನೀರನ್ನು ಪಡೆಯಲು ಶಕ್ತಿ ಅನುಗ್ರಹಿಸುವುದರೊಂದಿಗೆ ಇಲ್ಲಿಯೇ ಕೆರೆಯನ್ನು ಹಾಗೂ ದೇವಾಲಯವನ್ನು ಸ್ಥಾಪಿಸುವಂತೆ ಹೇಳಿದಳು. ಅದರಂತೆ ಭೀಮ ಈ ಕೆರೆ ನಿರ್ಮಿಸಿದ’ ಎಂಬುದೊoದು ಕಥೆ.

ADVERTISEMENT
ದುರ್ಗಾದೇವಿ

`ಭೀಮ ಆಹಾರಕ್ಕಾಗಿ ಹಣ್ಣು ಹಂಪಲುಗಳನ್ನು ಅರಸುತ್ತ ಕಾಡಿನಲ್ಲಿ ಅಲೆಯುತ್ತಿದ್ದಾಗ ಇಂಪಾದ ಸಂಗೀತವೊoದು ಕೇಳಿ ಬಂತು. ಅದರ ಮೂಲವನ್ನು ಹುಡುಕಿ ಹೊರಟ ಆತನಿಗೆ ದುರ್ಗಾ ಮೂರ್ತಿಯೊಂದು ಕಣ್ಣಿಗೆ ಬಿತ್ತು. ದುರ್ಗಾದೇವಿಯು ಪ್ರತ್ಯಕ್ಷಳಾಗಿ ಕಾಶಿಯಿಂದ ಗಂಗೆಯ ನೀರನ್ನು ಕವಡೆಯಲ್ಲಿ ತಂದು ಇಲ್ಲಿ ಸ್ಥಾಪಿಸುವಂತೆ ಆಜ್ಞಾಪಿಸಿದಳು. ಅದರಂತೆ ಭೀಮ ಕೆರೆಯನ್ನು ನಿರ್ಮಿಸಿ ದಡದಲ್ಲಿ ದುರ್ಗಾಮೂರ್ತಿಯನ್ನು ಪ್ರತಿಷ್ಠಾಪಿಸಿದ’ ಎಂಬ ಕಥೆಯೂ ಇದೆ. ಇನ್ನೊಂದೆಡೆ ಭೀಮನು ಕಾಡಿನಲ್ಲಿ ಅಲೆಯುತ್ತಿದ್ದಾಗ ಬಾಯಾರಿಕೆಯನ್ನು ತಾಳಲಾರದೇ ಕೋಪದಿಂದ ತನ್ನ ಕಾಲಿನ ಹೆಬ್ಬೆರಳಿನಿಂದ ತಿವಿದು ಕೆರೆಯನ್ನು ಸೃಷ್ಟಿಸಿದ ಎಂಬ ಕಥೆಯಿದೆ. ನೂರಾರು ಜಾತಿಯ ಜಲಚರಗಳಿಗೆ ಆಶ್ರಯ ತಾಣವಾಗಿರುವ ಕವಡಿಕೆರೆ ಇತ್ತೀಚೆಗೆ ಉತ್ತಮ ಪ್ರವಾಸಿತಾಣವಾಗಿಯೂ ಪ್ರಸಿದ್ಧವಾಗಿದೆ. ಭೀಕರ ಬರಗಾಲ ಬಂದರೂ ಸಹ ಬತ್ತದೇ ಇರುವುದು ಈ ಕೆರೆಯ ವಿಶೇಷತೆ.

– ಶ್ರೀಧರ ವೈದಿಕ

Advertisement. Scroll to continue reading.
Advertisement. Scroll to continue reading.
Previous Post

ಕಾಳಿ ಎಂಬ ಕಪ್ಪು ಸುಂದರಿಯ ಬಗ್ಗೆ ನಿಮಗೆಷ್ಟು ಗೊತ್ತು?

Next Post

ನೀವು ಉದ್ದಿಮೆದಾರರಾಗಬೇಕೆ? ಪರಿಶಿಷ್ಟ ಮಹಿಳೆಯರಿಗೆ ಸುವರ್ಣಾವಕಾಶ!

Next Post

ನೀವು ಉದ್ದಿಮೆದಾರರಾಗಬೇಕೆ? ಪರಿಶಿಷ್ಟ ಮಹಿಳೆಯರಿಗೆ ಸುವರ್ಣಾವಕಾಶ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ