ಜಿಲ್ಲಾಕೇಂದ್ರ ಕಾರವಾರದಲ್ಲಿನ ಎಂ ಜಿ ರಸ್ತೆಯಲ್ಲಿ ಪೊಲೀಸರಿಗಾಗಿ ವಸತಿ ನಿಲಯ ನಿರ್ಮಿಸಿ ಒಂದುವರೆ ವರ್ಷ ಕಳೆದಿದ್ದು, ಇದೀಗ ಅದನ್ನು ಪೊಲೀಸರಿಗೆ ಹಸ್ತಾಂತರ ಮಾಡಲು ಮುಹೂರ್ತ ಕೂಡಿಬಂದಿದೆ.
ಚುನಾವಣೆ ನೀತಿ ಸಂಹಿತೆ, ಇಲಾಖೆಗೆ ಕಟ್ಟಡ ಹಸ್ತಾಂತರ, ಅಧಿಕಾರಿಗಳ ವರ್ಗಾವಣೆ ಹಾಗೂ ವಿವಿಧ ಸಣ್ಣಪುಟ್ಟ ಕಾರಣಗಳ ಹಿನ್ನಲೆ ಗುತ್ತಿಗೆದಾರರು ಕಟ್ಟಡ ಕೆಲಸ ಮುಗಿಸಿ ಒಂದುವರೆ ವರ್ಷ ಕಳೆದರೂ ಪೊಲೀಸರಿಗೆ ಈ ಮನೆ ದೊರೆತಿರಲಿಲ್ಲ. ಜನರಿಗೆ ನ್ಯಾಯ ಕೊಡಿಸುವ ಪೊಲೀಸರಿಗೆ ಅನ್ಯಾಯವಾಗಿರುವ ಬಗ್ಗೆ ಜೂನ್ 28ರಂದು `ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!’ ಎಂಬ ಶಿರ್ಷಿಕೆ ಅಡಿ S News ಡಿಜಿಟಲ್ ವರದಿ ಪ್ರಸಾರ ಮಾಡಿತ್ತು.
ಅದಾಗಿ ಎರಡು ದಿನದಲ್ಲಿ ಅಧಿಕಾರ ಸ್ವೀಕರಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಅವರು ಪೊಲೀಸರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದ್ದರು. ದುಬಾರಿ ಮನೆ ಬಾಡಿಗೆಯಿಂದ ಪೊಲೀಸ್ ಸಿಬ್ಬಂದಿ ಜೀವನ ನಡೆಸುತ್ತಿರುವುದು ಕಷ್ಟ ಎಂದು ಅರಿತು ಅದಕ್ಕಿರುವ ಎಲ್ಲಾ ತೊಡಕುಗಳನ್ನು ನಿವಾರಿಸಿದರು. ಅದರ ಪರಿಣಾಮವಾಗಿ ಇದೀಗ ಅರ್ಹರಿಗೆ ಮನೆ ಹಂಚಿಕೆ ಆಗಲಿದೆ.. ಈ ಕಟ್ಟಡದಲ್ಲಿರುವ ಪ್ರತಿ ಮನೆಯೂ ಡಬಲ್ ಬೆಡ್ ರೂಂ ಹೊಂದಿದೆ. ಪ್ರತ್ಯೇಕ ಅಡುಗೆಮನೆ, ಹಾಲ್, ಸ್ನಾನ ಹಾಗೂ ಶೌಚಾಲಯಗಳಿವೆ. ಪೊಲೀಸರ ಮೂಲ ವೇತನದಲ್ಲಿ ಪ್ರತಿ ತಿಂಗಳು ಶೇ 10ರಷ್ಟು ಕಡಿತಗೊಳಿಸಿ ಈ ಮನೆಗಳನ್ನು ಅವರಿಗೆ ನೀಡಲಾಗುತ್ತಿದ್ದು, ಇದರಿಂದ ಸರ್ಕಾರಿ ಬೊಕ್ಕಸಕ್ಕೂ ಆದಾಯ ಬರಲಿದೆ.
ಜೂನ್ 28ರಂದು ಪ್ರಕಟವಾಗಿದ್ದ `ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!’ ವರದಿಯನ್ನು ಇಲ್ಲಿ ಓದಿ..
ಸರ್ಕಾರಕ್ಕೆ ನಷ್ಟ – ಪೊಲೀಸರಿಗೆ ಸಂಕಷ್ಟ: ಆರಕ್ಷಕರಿಗೆ ಗೃಹಲಕ್ಷ್ಮಿಯೂ ಇಲ್ಲ, ಗೃಹಭಾಗ್ಯವೂ ಸಿಕ್ಕಿಲ್ಲ!





Discussion about this post