ಸಿದ್ದಾಪುರ: ತಾಲೂಕಿನ ಹಲವು ಕಡೆ ಗುಡ್ಡದ ಮರ ರಸ್ತೆಗೆ ವಾಲಿದೆ. ಇದರಿಂದ ಕೆಎಸ್ಆರ್ಟಿಸಿ ಸೇರಿ ವಿವಿಧ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗಿದೆ.
ರಾಜ್ಯ ಹೆದ್ದಾರಿ ಹಾಗೂ ಗ್ರಾಮೀಣ ಪ್ರದೇಶಗಳ ಮುಖ್ಯ ರಸ್ತೆಗೆ ದೊಡ್ಡ ದೊಡ್ಡ ಮರಗಳು ಅಡ್ಡವಾಗಿದೆ. ಯಾವ ಕ್ಷಣದಲ್ಲಿ ಮರ ಬೀಳುತ್ತದೆ ಎಂಬ ಆತಂಕದಲ್ಲಿ ಸವಾರರು ವಾಹನ ಓಡಿಸುತ್ತಿದ್ದಾರೆ.
ಕೋಲಸಿರ್ಸಿ- ಹಾರ್ಸಿಕಟ್ಟಾ, ಗೋಳಿಮಕ್ಕಿ ರಸ್ತೆ, ಹೇರೂರು- ಸರಕುಳಿ ರಸ್ತೆ, ಸಿದ್ದಾಪುರ- ಕುಮಟಾ ರಸ್ತೆ, ಬಿದ್ರಕಾನ- ಬಿಳಗಿ ರಸ್ತೆ, ಮೆಣಸಿ- ಲಂಬಾಪುರ ರಸ್ತೆ, ಸಿದ್ದಾಪುರ- ಶಿರಸಿ ರಸ್ತೆಯ ತ್ಯಾಗಿ ಕಾನಸೂರು ನಡುವೆ ಅನೇಕ ಮರ ವಾಲಿರುವುದು ಕಾಣುತ್ತದೆ. ಮನಮನೆ- ಜೋಗ, ಮಾವಿನಗುಂಡಿ- ಹೊನ್ನಾವರ ಮಾರ್ಗದಲ್ಲಿ ಅಪಾಯದಲ್ಲಿರುವ ಅಕೇಶಿಯಾ ಹಾಗೂ ಕೆಲವು ಕಾಡುಜಾತಿಯ ಮರಗಳು ರಸ್ತೆಯ ಕಡೆ ಮುಖ ಮಾಡಿವೆ.





Discussion about this post