ಸ್ವಾತಂತ್ರೋತ್ಸವ ಅಂಗವಾಗಿ ಕಾರವಾರದಲ್ಲಿ ಸೈಕ್ಲೋತಾನ್ ಜಾಥಾ ನಡೆದಿದ್ದು, ಅನೇಕರು ಸೈಕಲ್ ಮೂಲಕ ಸಂಚರಿಸಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅನೇಕರು ಉತ್ಸಾಹದಿಂದ ಈ ಜಾಥಾದಲ್ಲಿ ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಈ ಜಾಥಾಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರತಿ ಮನೆ – ಕಚೇರಿಯಲ್ಲಿಯೂ ತಿರಂಗ ಧ್ವಜ ಹಾರಾಟ ನಡೆಸಿ ದೇಶಪ್ರೇಮ ಮೆರೆಯುವಂತೆ ಕರೆ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಹೊರಡ ಜಾಥಾ ನಗರದ ವಿವಿಧ ಕಡೆ ಸಂಚರಿಸಿ ಕೊನೆಗೆ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು. ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾಡಳಿತದ ಸಿಬ್ಬಂದಿ ಹಾಜರಿದ್ದರು.
ಸೈಕಲ್ ಜಾಥಾದ ವಿಡಿಯೋ ಇಲ್ಲಿ ನೋಡಿ..





Discussion about this post