6
  • Latest

Cinema | ಬೆಳಂಬಾರ ಹುಡುಗನ ಸಿನಿಮಾ ಕನಸು: ತೆರೆಗೆ ಬಂದ ಪತ್ತೆದಾರಿ ಪ್ರೇಮಕತೆಯ ಚಿತ್ರ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸಿನೆಮಾ

Cinema | ಬೆಳಂಬಾರ ಹುಡುಗನ ಸಿನಿಮಾ ಕನಸು: ತೆರೆಗೆ ಬಂದ ಪತ್ತೆದಾರಿ ಪ್ರೇಮಕತೆಯ ಚಿತ್ರ

AchyutKumar by AchyutKumar
in ಸಿನೆಮಾ

ಅಂಕೋಲಾದ ಪ್ರತಿಭೆಗಳು ಸೇರಿ ನಟಿಸಿರುವ ಕುತೂಹಲಕಾರಿ, ಪತ್ತೆದಾರಿ, ಪ್ರೇಮಕಥೆಯನ್ನು ಒಳಗೊಂಡ ಕಿರುಚಿತ್ರ (Cinema) `ಪ್ರತೀಕಾರ’ ಯೂಟೂಬಿನಲ್ಲಿ ಬಿಡುಗಡೆಯಾಗಿದೆ.

ADVERTISEMENT

ಸುಗ್ಗಿ ಕುಣಿತ, ಮರ ಕಾಲು ಕುಣಿತ, ಗುಮಟೆವಾದನ, ಜಾನಪದ ಹಾಡು, ನಾಟಕ, ಯಕ್ಷಗಾನ ಮುಂತಾದ ಕಲೆಗಳಿಗೆ ಹಾಗೂ ನಾಟಿ ಔಷಧಕ್ಕೆ ಹೆಸರುವಾಸಿಯಾದ ಅಂಕೋಲಾ ತಾಲೂಕಿನ ಬೆಳಂಬಾರದ ಯುವಕರ ತಂಡ ಈ ಚಿತ್ರ ನಿರ್ಮಿಸಿದೆ. `ಶ್ರೀ ಮಹಾಸತಿ ಫಿಲಂಸ್’ ಅಡಿ ನಿರ್ಮಿಸಿದ ಈ ಚಿತ್ರಕ್ಕೆ ನಿಸರ್ಗದ ಮಡಿಲಲ್ಲಿ 6 ತಿಂಗಳ ಕಾಲ ಚಿತ್ರಿಕರಣ ನಡೆಸಲಾಗಿದೆ.

ಬೆಳಂಬಾರದ ಯುವ ಹವ್ಯಾಸಿ ಕಲಾವಿದರಾದ ಕವಿರಾಜ್ ಗೌಡ ಕಲೆಯಲ್ಲಿ ಆಸಕ್ತಿ ಹೊಂದಿದ್ದು, ಕೆಲವು ನಾಟಕ ಕಲಾವಿದರ, ಲೇಖಕರ ಪ್ರೋತ್ಸಾಹದಿಂದ ಅನೇಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಈಗ ಸ್ವತಃ ತಾವೇ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಹಾಗೂ ಸಂಕಲನ ಮಾಡಿದ್ದಾರೆ.

Advertisement. Scroll to continue reading.

ಈ ಕಿರುಚಿತ್ರದಲ್ಲಿ ಎರಡು ಆಯಾಮಗಳಿದ್ದು, ಮೊದಲನೇ ಆಯಾಮದಲ್ಲಿ ಸರಣಿ ಕೊಲೆ ಮತ್ತು ಕೊಲೆಗಾರನ ಪತ್ತೆ ಹಚ್ಚುವ ಕಾರ್ಯ ಪೊಲೀಸ್ ಅಧಿಕಾರಿಂದ ನಡೆಯುತ್ತದೆ. ಆದರೆ ಮುಖವಾಡ ಧರಿಸಿ ಕೊಲೆಗೈಯ್ಯುವ ಆ ಸರಣಿ ಕೊಲೆಗಾರ ಯಾರು? ಕೊಲೆಗೆ ಕಾರಣವೇನು? ಎನ್ನುವುದು ಮಾತ್ರ ನಿಗೂಢವಾಗಿರುತ್ತದೆ. ಈ ಮಧ್ಯೆ ಸೈಕೋ ಕಿಲ್ಲರ್ ಓರ್ವ ಜೈಲಿನಿಂದ ಪರಾರಿಯಾಗಿರುತ್ತಾನೆ. ಆತನೇ ಈ ಎಲ್ಲಾ ಕೊಲೆಗೆ ಕಾರಣನೇ ಎನ್ನುವ ಸಂಶಯ ಪೊಲೀಸ್ ಅಧಿಕಾರಿಗೆ ಎದುರಾಗುತ್ತದೆ. ಆದರೆ ಎರಡನೇ ಆಯಾಮದಲ್ಲಿ ಆ ಸರಣಿ ಕೊಲೆ ಹಂತಕ ಯಾರು? ಕೊಲೆಗೆ ಕಾರಣ ಏನು? ಎನ್ನುವ ಸತ್ಯಾಂಶ ತಿಳಿಯುತ್ತದೆ.

Advertisement. Scroll to continue reading.

ಹವ್ಯಾಸಿ ಕಲಾವಿದರಾದ ಕವಿರಾಜ ಗೌಡ, ರವೀಂದ್ರ ಗೌಡ, ಪ್ರಜ್ವಲ್, ರಾಜೇಶ್ವರಿ, ನಿಖಿತ, ಶಿವಾನಿ, ರವೀಶ್, ಗೋವಿಂದ, ಮಾಬ್ಲು, ಅಶ್ವಥ್, ಸಂದೀಪ ಪ್ರಮುಖ ತಾರಾಗಣದಲ್ಲಿದ್ದಾರೆ’ ಎಂದು ಪ್ರವೀಣಕುಮಾರ್ ಬೆಳಂಬಾರ ವಿವರಿಸಿದರು.

ಈ ಕಿರುಚಿತ್ರವನ್ನು ಇಲ್ಲಿ ನೋಡಿ..

 

Previous Post

vishwadarshana: `ಶಾಲೆ ಮುಂದಿನ ಅಪಾಯ ತಪ್ಪಿಸಿ’

Next Post

Agriculture news | ನಮಸ್ಕಾರ.. ಕೃಷಿ ವಾರ್ತೆಗೆ ಸ್ವಾಗತ!

Next Post

Agriculture news | ನಮಸ್ಕಾರ.. ಕೃಷಿ ವಾರ್ತೆಗೆ ಸ್ವಾಗತ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ