6
  • Latest
Yakshagana | ಯಕ್ಷಶ್ರೀ: ಅಧ್ಯಯನ ಆಸಕ್ತಿಯೇ ಅವರ ಬಂಡವಾಳ!

Yakshagana | ಯಕ್ಷಶ್ರೀ: ಅಧ್ಯಯನ ಆಸಕ್ತಿಯೇ ಅವರ ಬಂಡವಾಳ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮೈ ವಾಪಸ್ ಆವುಂಗಾ’ ಥಿಯೇಟರ್ ಟೂರ್: ಬೆಂಗಳೂರಿನಲ್ಲಿ ಇಮ್ತಿಯಾಜ್ ಅಲಿಗೆ ಸಿಕ್ಕಿತು ಭವ್ಯ ಸ್ವಾಗತ!

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

*ಮಲೆಯಾಳಂ ಚಿತ್ರ ಕಟ್ಟಾಲನ್ ಮೇ 14 ರಂದು ಬಿಡುಗಡೆ

ADVERTISEMENT
  • Home
Friday, July 3, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

Yakshagana | ಯಕ್ಷಶ್ರೀ: ಅಧ್ಯಯನ ಆಸಕ್ತಿಯೇ ಅವರ ಬಂಡವಾಳ!

AchyutKumar by AchyutKumar
in ಲೇಖನ

ಪದ್ಯ – ಪಾತ್ರ – ಪ್ರಸಂಗ ನಡೆಗಳ ಕುರಿತು ಸ್ಪಷ್ಟವಾದ ತಿಳುವಳಿಕೆ, ಅಧ್ಯಯನದಲ್ಲಿ ಆಸಕ್ತಿ, ಶುದ್ಧವಾದ ಭಾಷೆ, ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಅರ್ಹತೆ, ಪದ್ಯದ ಭಾವಕ್ಕೆ ಹೆಚ್ಚು ಮಹತ್ವ ನೀಡಿದ ಅಚ್ಚುಕಟ್ಟಾದ ಅರ್ಥಗಾರಿಕೆಯ ಪ್ರಸ್ತುತಿಯ ಕಾರಣ ಕಲಾಸಕ್ತರಿಂದ ಉತ್ತಮ (  Yakshagana ) ತಾಳಮದ್ದಳೆ ಅರ್ಥಧಾರಿ ಕುಂಬ್ರಿಕೊಟ್ಟಿಗೆ ಆರ್.ವಿ ಹೆಗಡೆಯವರು.

ಯಲ್ಲಾಪುರ ತಾಲೂಕು ಹೊನಗದ್ದೆಯವರಾದ ಅವರು ಓದಿದ್ದು ಪಿಯುಸಿ. ತಾಳಮದ್ದಲೆ ಅರ್ಥ ಹೇಳಲು ಶುರು ಮಾಡಿದ್ದು ತಮ್ಮ 26ನೇ ವಯಸ್ಸಿನಲ್ಲಿ. ಇಡಗುಂದಿ ರಾಮಲಿಂಗೇಶ್ವರ ದೇವಳದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅವರಿಗೆ ಅವಕಾಶ ಸಿಕ್ಕಿದ್ದು, ಈರಾಪುರ ಕಳಚೆ ಭಾಗದ ಉತ್ಸಾಹಿ ಕಲಾವಿದರ ಕೂಡುವಿಕೆಯ `ತ್ರಯಂಬಕೇಶ್ವರ ಯಕ್ಷಗಾನ ಮಂಡಳಿ’ಯವರು ಆಯೋಜಿಸಿದ್ದ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಯಲ್ಲಾಪುರದ ವಿವಿಧ ಭಾಗಗಳಲ್ಲಿ ಜರುಗುತ್ತಿದ್ದ ತಾಳಮದ್ದಳೆ ಕೂಟಗಳಲ್ಲಿ ಹಿರಿಕಿರಿಯ ಎಲ್ಲಾ ಅರ್ಥಧಾರಿಗಳೊಡನೆ ಅವರು ಬೆರೆತು ಅನುಭವ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಕಲ್ಮನೆ(ಶಿವ ಗುರೂಜಿ) ವಿ.ಎಸ್ ಭಟ್ ಅಬ್ಬಿತೋಟ, ಭಾಸ್ಕರ ಭಟ್, ಮಂಜುನಾಥ ಭಟ್ ಮೊದಲಾದ ಕಲಾಸಕ್ತ ಉತ್ಸಾಹಿ ಶಿಕ್ಷಕರ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಕ್ಷಪಂಚಮಿ ತಾಳಮದ್ದಳೆ ಕೂಟದಲ್ಲಿ ಪ್ರಧಾನ ಅರ್ಥಧಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕರ್ಣ, ಶಲ್ಯ, ಸುಭದ್ರೆ, ಲಕ್ಷ್ಮಣ, ಸುಗ್ರೀವ, ಹನುಮಂತ, ದೇವಯಾನಿ, ಕೃಷ್ಣ, ಮೋಹಿನಿ ಹೀಗೆ ಅನೇಕ ಬಗೆಯ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ತಾಳಮದ್ದಳೆಯೊಟ್ಟಿಗೆ ಯಕ್ಷಗಾನ, ನಾಟಕಗಳಿಗೆ ಸಹ ಅವರ ಕೊಡುಗೆ ಅಪಾರ. ಕಳೆದ 24 ವರ್ಷಗಳಿಂದ ಅವರು ಕಲಾ ಸೇವೆಯಲ್ಲಿದ್ದಾರೆ.

ಜೀವನ ನಿರ್ವಹಣೆಗೆ ಆಧಾರವಾದ ಕೃಷಿಯಂತೆ ಕಲೆ ಕೂಡ ಆರ್.ವಿ ಹೆಗಡೆ ಅವರಿಗೆ ಹಿಂದಿನ ತಲೆಮಾರಿನವರಿಂದ ಸಿಕ್ಕಿದ್ದು. ಅವರ ಅಜ್ಜ ಮತ್ತು ತಂದೆ ಸಹ ಪ್ರಸಿದ್ಧ ಕಲಾವಿರಾಗಿ ಮೆರೆದವರು. ಮನೆ ಮತ್ತು ಊರಿನಲ್ಲಿದ್ದ ದಟ್ಟವಾದ ಯಕ್ಷಗಾನ ವಾತಾವರಣದ ಜೊತೆಗೆ ಸಮರ್ಥ ಅರ್ಥಧಾರಿ ಬಾಳಂತನಪಾಲ ನಾರಾಯಣ ಗಾಂವ್ಕಾರರ ಪ್ರಭಾವದಿಂದ ತಾಳಮದ್ದಳೆಗಳಲ್ಲಿ ತೊಡಗಿಸಿಕೊಂಡವರಿವರು. ತಮ್ಮ ಅಧ್ಯಯನ ಬಲದಿಂದ ಉತ್ತಮ ಅರ್ಥಧಾರಿಯಾಗಿ ರೂಪುಗೊಳ್ಳುವುದರೊಂದಿಗೆ ತಮ್ಮ ಸರಳತೆ ಸಜ್ಜನಿಕೆಯಿಂದಲೂ ಎಲ್ಲರ ಪ್ರೀತಿ ಪಡೆದಿದ್ದಾರೆ.

– ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
Previous Post

Shiruru | ಕೊನೆಗೂ ಪತ್ತೆಯಾಯ್ತು ಅರ್ಜುನನ ಲಾರಿ!

Next Post

Driving awareness | ಮಳೆಗಾಲ: ವಾಹನ ಓಡಿಸುವಾಗ ಇರಲಿ ಜಾಗೃತಿ!

Next Post

Driving awareness | ಮಳೆಗಾಲ: ವಾಹನ ಓಡಿಸುವಾಗ ಇರಲಿ ಜಾಗೃತಿ!

Yathra | ವಿಜಯ ದಶಮಿ: ಯಾತ್ರೆಗೆ ಹೋರಟಿದ್ದೀರಾ? ಈ ಮಾಹಿತಿ ನಿಮಗೆ ನೆರವಾಗಬಹುದು!

Shiruru | ಈಶ್ವರನಿಗೆ ಸಲ್ಲಿಸಿದ ಕಾಣಿಕೆ ಜಗನಾಥನಿಗೂ ಅರ್ಪಣೆ: ಸರ್ಕಾರದಿಂದಲೂ ಆಗದ ಪುಣ್ಯಕಾರ್ಯ ಮಾಡಿದ ನಮ್ಮೂರ ಜನ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.