6
  • Latest

Municipality | ಪ ಪಂ ಚುನಾವಣೆ: ಬಿಜೆಪಿಯಿಂದ ಬಹಿಷ್ಕಾರದ ಘೋಷಣೆ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

Municipality | ಪ ಪಂ ಚುನಾವಣೆ: ಬಿಜೆಪಿಯಿಂದ ಬಹಿಷ್ಕಾರದ ಘೋಷಣೆ!

`ಮರ್ಡರ್ ಪದ ಮೊದಲು ಬಳಸಿದ್ದು ಯಾರು? ಪೊಲೀಸರಿಗೆ ಇಲ್ವಂತೆ ಮಾಹಿತಿ

AchyutKumar by AchyutKumar
in ರಾಜಕೀಯ

ಯಲ್ಲಾಪುರ ಪಟ್ಟಣ ಪಂಚಾಯತ ( Municipality ) ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸೋಮೇಶ್ವರ ನಾಯ್ಕ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಿಸಿರುವುದನ್ನು ಯಲ್ಲಾಪುರ ನಗರ ಬಿಜೆಪಿ ಘಟಕ ಖಂಡಿಸಿದೆ. ಈ ಪ್ರಕರಣ ಖಂಡಿಸಿ ಅಗಸ್ಟ 21ರಂದು ನಡೆಯಲಿರುವ ಪ ಪಂ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನದ ಚುನಾವಣೆಯನ್ನು ಬಿಜೆಪಿ ಸದಸ್ಯರು ಬಹಿಷ್ಕರಿಸಿದ್ದಾರೆ.

ADVERTISEMENT

`ಯಲ್ಲಾಪುರ ಶಾಸಕರಿಗೆ ಬಿಜೆಪಿ ಪಕ್ಷದಿಂದ ವಿಪ್ ಜಾರಿಯಾದ ನಂತರ ಸೋಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದೆ. ಶಾಸಕರ ಕುಮ್ಮಕ್ಕಿನಿಂದ ಈ ಪ್ರಕರಣ ದಾಖಲಾದಂತೆ ಕಾಣುತ್ತಿದ್ದು, ರಾಜಕಾರಣದಲ್ಲಿ ಈ ರೀತಿಯ ಘಟನೆ ಕಪ್ಪುಚುಕ್ಕೆ’ ಬಿಜೆಪಿ ( BJP ) ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಆರೋಪಿಸಿದರು.

`ತಿಂಗಳ ಹಿಂದೆ ಬನವಾಸಿಯಲ್ಲಿ ಶಿವರಾಮ ಹೆಬ್ಬಾರ್, ಇಡಿ ಅವರು ನಮ್ಮನ್ನು ಮರ್ಡರ್ ಮಾಡುತ್ತಾರಾ? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಯಾಗಿ ಸೋಮೇಶ್ವರ ನಾಯ್ಕ, ನಿಮ್ಮನ್ನು ಯಾರೂ ಮರ್ಡರ್ ಮಾಡಲ್ಲ ಎಂದು ವಾಟ್ಸಪ್ ಸ್ಟೇಟಸ್ ಹಾಕಿದ್ದರು. ಮರ್ಡರ್ ಪದ ಬಳಕೆ ಮಾಡಿದ ಎಲ್ಲರ ಮೇಲೆಯೂ ಸ್ವಯಂ ಪ್ರೇರಣೆಯ ಪ್ರಕರಣ ದಾಖಲು ಮಾಡುವುದಾದರೆ ಶಾಸಕರ ಮೇಲೆ ಸಹ ಪ್ರಕರಣ ದಾಖಲಾಗಬೇಕಿತ್ತು ಎಂದು ಬಿಜೆಪಿ ಪ್ರಮುಖ ರಾಮು ನಾಯ್ಕ ಹೇಳಿದರು. ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದಾಗ `ಶಾಸಕರು ಈ ಪದ ಬಳಕೆ ಮಾಡಿದ ಬಗ್ಗೆ ಮಾಹಿತಿ ಇಲ್ಲ’ ಎಂದು ಪೊಲೀಸರು ತಿಳಿಸಿದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

Advertisement. Scroll to continue reading.

`ಈ ಹಿಂದೆ ಕಾಂಗ್ರೆಸ್ಸಿನಿoದ ಗೆದ್ದ ಪ ಪಂ ಸದಸ್ಯರು ಬಿಜೆಪಿ ಸೇರಿದ್ದರು. ಬಿಜೆಪಿಯ ಮೂಲಕ ವಿವಿಧ ಹುದ್ದೆಗಳನ್ನು ಅನುಭವಿಸಿದವರು ಇದೀಗ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಸೋಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಇತರರನ್ನು ಬೆದರಿಸುವ ತಂತ್ರ ನಡೆದಿದೆ. ನಮ್ಮ ಧ್ವನಿ ಅಡಗಿಸುವ ಪ್ರಯತ್ನ ಇದರಲ್ಲಿದೆ’ ಎಂದು ಬಿಜೆಪಿ ಪ್ರಮುಖರು ದೂರಿದರು.

Advertisement. Scroll to continue reading.

ಅಪಹರಣ ಶಂಕೆ:
`ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ಅಪಹರಣವಾಗಿರುವ ಶಂಕೆಯಿದೆ’ ಎಂದು ಪ ಪಂ ಸದಸ್ಯ ಶ್ಯಾಮಿಲಿ ಪಾಠಣಕರ್ ಅನುಮಾನ ವ್ಯಕ್ತಪಡಿಸಿದರು. `ಸೋಮವಾರ ರಾತ್ರಿಯಿಂದ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ’ ಎಂದವರು ಹೇಳಿದರು.

ಹೆಬ್ಬಾರ್ ಇದೆ ಗೌರವ:
`ಶಿವರಾಮ ಹೆಬ್ಬಾರ್ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಪಕ್ಷದ ವಿಚಾರದಲ್ಲಿ ಈ ಬಗೆಯ ನಡೆ ಸರಿಯಲ್ಲ’ ಎಂದು ಪ್ರಸಾದ ಹೆಗಡೆ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಉಮೇಶ ಭಾಗ್ವತ, ಜಿ ಎನ್ ಗಾಂವ್ಕರ್, ಪ್ರದೀಪ ಯಲ್ಲಾಪುರಕರ, ಆದಿತ್ಯ ಗುಡಿಗಾರ, ಕಲ್ಪನಾ ನಾಯ್ಕ, ಗಣಪತಿ ಮುದ್ದೇಪಾಲ್ ಇತರರು ಇದ್ದರು.

Previous Post

Fisherman | ಪಂಚಭೂತಗಳಲ್ಲಿ ಲೀನವಾದ ಮೀನುಗಾರ ಮುಖಂಡ

Next Post

Theft | ಶಿಕ್ಷಕನ ಮನೆಯಲ್ಲಿದ್ದ ಹಣ ಕಳುವು

Next Post

Theft | ಶಿಕ್ಷಕನ ಮನೆಯಲ್ಲಿದ್ದ ಹಣ ಕಳುವು

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ