ಕೆಡಿಸಿಸಿ ಬ್ಯಾಂಕಿಗೆ ಕಾರು ಖರೀದಿಸುವುದಾಗಿ ತಿಳಿಸಿ ನಕಲಿ ದಾಖಲೆ ನೀಡಿ ಕೋಟಿ ಲೆಕ್ಕಾಚಾರದಲ್ಲಿ ಹಣ ಪಡೆದಿದ್ದ ಬಹುತೇಕರು ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ಸಾಲದ ಕಂತು ಮರು ಪಾವತಿ ಮಾಡುತ್ತಿದ್ದರು. ಹೀಗಾಗಿಯೇ ಅವರ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ!
`ನಕಲಿ ಚಾವಿ, ನಕಲಿ ನೊಂದಣಿ ಸಂಖ್ಯೆ, ನಕಲಿ ಕಾಗದಪತ್ರಗಳನ್ನು ನೀಡಿ 42 ಕಾರುಗಳ ಖರೀದಿಗೆ ಹಣ ಪಡೆಯಲಾಗಿದೆ. ಆ ಪೈಕಿ 22 ಕಾರಿನ ಸಾಲದ ಮೊತ್ತ ಬಡ್ಡಿಸಹಿತ ವಸೂಲಿ ಆಗಿದ್ದು, ಉಳಿದ ಹಣವನ್ನು ಸಹ ವಸೂಲಿ ಮಾಡಲಾಗುತ್ತದೆ’ ಎಂದು ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹೇಳಿದ್ದಾರೆ. `ಒಟ್ಟು 3.40 ಕೋಟಿ ರೂ ಅವ್ಯವಹಾರ ನಡೆದಿದೆ. ಆದರೆ, ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಪಾತ್ರ ಏನೂ ಇಲ್ಲ’ ಎಂದವರು ಸಮರ್ಥಿಸಿಕೊಂಡಿದ್ದಾರೆ.
`ಇನ್ನೂ 17 ಕಾರುಗಳ ಮೊತ್ತ ಬಾಕಿ ಇದೆ. ಪತ್ರಕರ್ತರು ಎಂದು ಹೇಳಿಕೊಳ್ಳುವವರ ಜೊತೆ ಕೆಲ ಪ್ರತಿಷ್ಠಿತರು ಈ ಹಗರಣದಲ್ಲಿದ್ದು ಯಾರನ್ನು ಕ್ಷಮಿಸುವುದಿಲ್ಲ. ಈಗಾಗಲೇ ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ’ ಎಂದವರು ಹೇಳಿದರು. `ಬ್ಯಾಂಕಿಗೆ ಮೋಸ ಮಾಡಿದ ವಿಷಯದಲ್ಲಿ ರಾಜಿಯೂ ಇಲ್ಲ. ಹಸ್ತಕ್ಷೇಪವನ್ನು ಮಾಡಲ್ಲ’ ಎಂದರು.
ಇನ್ಮುoದೆ ಈ ರೀತಿ ಅಪರಾತಪರಾ ಆಗದಂತೆ ತಡೆಯಲು ಎಜನ್ಸಿ ನೇಮಿಸುವ ಬಗ್ಗೆ ಚಿಂತನೆಯಲ್ಲಿದ್ದು, ಕಾರು ಪಡೆದ ನಂತರ ಅದರ ಫೋಟೋ ಮಾಹಿತಿ ಬ್ಯಾಂಕಿಗೆ ಸಲ್ಲಿಕೆಯಾಗಲಿದೆ.




