6
  • Latest
She from Uttara Kannada is famous in Dakshina Kannada

ಉತ್ತರ ಕನ್ನಡದ ಈಕೆ ದಕ್ಷಿಣ ಕನ್ನಡದಲ್ಲಿ ಫೇಮಸ್ಸು!

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ವ್ಯಾಪಕ ಮಳೆ: ಬೀಗಾರಿನಲ್ಲಿ ‘ವಾರ್ಷಿಕ’ ಭೂಕುಸಿತ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಉತ್ತರ ಕನ್ನಡದ ಈಕೆ ದಕ್ಷಿಣ ಕನ್ನಡದಲ್ಲಿ ಫೇಮಸ್ಸು!

AchyutKumar by AchyutKumar
in ಲೇಖನ
She from Uttara Kannada is famous in Dakshina Kannada

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಬಿಸಲಕೊಪ್ಪ ಮೂಲದ ಅನಘಾ ಹೆಗಡೆ ದಕ್ಷಿಣ ಕನ್ನಡ ಜಿಲ್ಲೆಯ ಭರತನಾಟ್ಯದಲ್ಲಿ ಹೆಸರು ಮಾಡುತ್ತಿದ್ದಾರೆ. ಕಾಂತಾರಾ ಚಿತ್ರದ ಮಾನಸಿ ಸುಧೀರ ಅವರಲ್ಲಿ ಭರತನಾಟ್ಯ ಕಲಿತ ಅವರು ರಾಜ್ಯದ ನಾನಾ ಭಾಗದಲ್ಲಿನ ವೇದಿಕೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ADVERTISEMENT

ಅನಘಾ ಹೆಗಡೆ ಉದ್ಯಮಿ ಎಲ್.ಎಂ. ಹೆಗಡೆ ಹಾಗೂ ವಿದ್ಯಾ ಹೆಗಡೆ ಅವರ ಪುತ್ರಿ. ಉಡುಪಿಯ ಎಂಜಿಎA ಕಾಲೇಜಿನಲ್ಲಿ ಬಿಎಸ್ಸಿ ಮುಗಿಸಿ ಮಣಿಪಾಲದಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಲ್ಲಿಯೇ ನೃತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು 6ನೇ ವಯಸ್ಸಿನಲ್ಲಿ ನೃತ್ಯನಿಕೇತನ ಸಂಸ್ಥೆ ಸೇರಿದರು. ವಿದ್ವಾನ್ ಸುಧೀರ್ ರಾವ್ ಕೊಡವೂರು ಮತ್ತು ವಿದುಷಿ ಮಾನಸಿ ಸುಧೀರ್ ಅವರಲ್ಲಿ ನೃತ್ಯಾಭ್ಯಾಸ ಮುಂದುವರೆಸಿದರು. ಕಳೆದ ಐದು ವರ್ಷದಿಂದ ಸಂಸ್ಥೆಯ ನೃತ್ಯ ತಂಡದಲ್ಲಿರುವ ಅವರು ವಿವಿಧ ಸಂದರ್ಭಗಳಲ್ಲಿ ರಾಷ್ಟ್ರೀಯ ಮಟ್ಟದ ಅನೇಕ ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಕರ್ನಾಟಕ ಸಂಗೀತವನ್ನು ಕಲಿಯುತ್ತಿದ್ದಾರೆ. 2022ರಲ್ಲಿ ಭರತನಾಟ್ಯದ ವಿದ್ವತ್ ಪೂರ್ಣಗೊಳಿಸಿದ್ದಾರೆ.

ಉಡುಪಿ ಕೊಡವೂರಿನ ಶಂಕರ ನಾರಾಯಣ ದೇವಸ್ಥಾನ ಮತ್ತು ನೃತ್ಯ ನಿಕೇತನ ಸಂಯೋಜನೆಯಲ್ಲಿ ನಡೆದ `ನೃತ್ಯ ಶಂಕರ’ 63ನೇ ಸರಣಿಯಲ್ಲಿ ಅನಘಾ ಹೆಗಡೆ ಅವರ ನೃತ್ಯ ನೋಡುಗರ ಕಣ್ಮನ ಸೆಳೆದಿದ್ದು, ಚಪ್ಪಾಳೆಯ ಸುರಿಮಳೆಯೊಂದಿಗೆ ಅವರು ವೇದಿಕೆಯನ್ನು ಬೇರೆಯವರಿಗೆ ಬಿಟ್ಟುಕೊಟ್ಟರು. ವಿಘ್ನ ನಿವಾರಕ ಗಣಪತಿಯನ್ನು ಸ್ಮರಿಸಿ ನಟರಾಜನಿಗೆ ಪುಷ್ಪಾಂಚಲಿ ಅರ್ಪಿಸಿ ನಾಟ್ಯ ಶುರು ಮಾಡಿದ ಅನಘಾ ಹೆಗಡೆ ರಾಗ್ ಸರಸ್ವತಿ ಮತ್ತು ಆದಿ ತಾಳದಲ್ಲಿ ಮಧುರೈ ಆರ್ ಮುರಳೀಧರನ್ ರಚಿಸಿರುವ ಕೃತಿಗೆ ಹೆಜ್ಜೆ ಹಾಕಿದರು.

Advertisement. Scroll to continue reading.

ವಿಷ್ಣುವಿನ ಮಹಿಮೆ ಸಾರುವ ದಶಾವತಾರ ನೃತ್ಯ, ಶಿವ ತಾಂಡವ ನೃತ್ಯ, ರಾಮಾಯಣ ಕಥೆ ಆಧಾರಿತ ಕನಕದಾಸ ರಚನೆಯ `ಏನೆಂದಳೇನೆoದಳು ನಿನ್ನೊಳು ಸೀತೆ ಹನುಮಯ್ಯ’ ಹಾಡಿಗೆ ನೃತ್ಯ ಮಾಡಿದರು. ದೇವಿಯ ಮಹಿಮೆ ಪ್ರಶಂಸಿಸುವ ರಕ್ತ ಬೀಜಾಸುರನ ಸಂಹಾರ ನೃತ್ಯ ಹಾಗೂ ತಿಲ್ಲಾನದಲ್ಲಿ ರಾಗ ಬೃಂದಾವನೀಯ ಮತ್ತು ಆದಿ ತಾಳದಲ್ಲಿ ಎಂ ಬಾಲಮುರಳೀಕೃಷ್ಣನ್ ಅವರ ಸಂಯೋಜನೆಯ ನೃತ್ಯ ಪ್ರದರ್ಶಿಸಿದ್ದು ಜನ ಮೆಚ್ಚುಗೆಗೆ ಪಾತ್ರವಾಯಿತು.

Advertisement. Scroll to continue reading.
Previous Post

ಕಬೀರ ಕಂಡoತೆ | ಆಪತ್ತಿಗೆ ಆದವನೇ ನಿಜವಾದ ಬಂಧು!

Next Post

ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!

Next Post

ರಿಕ್ಷಾವಾಲನಿಗೆ ವಿದೇಶಿ ವ್ಯಾಮೋಹ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ