6
  • Latest

ಕಾನೂನು ಮಾಹಿತಿ | ನಮ್ಮ ತೋಟಕ್ಕೆ ಬೇರೆಯವರ ದನ ನುಗ್ಗಿದರೆ ಏನು ಮಾಡಬೇಕು?

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಕಾನೂನು ಮಾಹಿತಿ | ನಮ್ಮ ತೋಟಕ್ಕೆ ಬೇರೆಯವರ ದನ ನುಗ್ಗಿದರೆ ಏನು ಮಾಡಬೇಕು?

AchyutKumar by AchyutKumar
in ಲೇಖನ

ಗ್ರಾಮೀಣ ಭಾಗದ ರೈತರ ತೋಟಗಳಿಗೆ ಬೇರೆಯವರ ಮಾಲಕತ್ವದ ದನ ನುಗ್ಗುವುದು ಸಾಮಾನ್ಯ. ದನ ನುಗ್ಗಿ ಬೆಳೆ ಹಾಳು ಮಾಡಿದ ಪ್ರಕರಣಗಳಿಗೆ ಸಂಬoಧಿಸಿ ಸಾಕಷ್ಟು ಹೊಡೆದಾಟ-ವಾಗ್ವಾದಗಳು ನಡೆದಿದೆ. ಅಲ್ಲಲ್ಲಿ ದನಗಳನ್ನು ದಂಡಿಸುವ ಪ್ರಕ್ರಿಯೆ ಸಹ ಮುಂದುವರೆದಿದೆ. ಬೇರೆಯವರ ದನ ನಮ್ಮ ತೋಟಕ್ಕೆ ನುಗ್ಗಿದಾಗ ಏನು ಮಾಡಬೇಕು? ಇದಕ್ಕಾಗಿಯೇ ಒಂದು ಕಾನೂನು ಇದೆ!

ADVERTISEMENT

ಬೇರೆಯವರ ತೋಟಕ್ಕೆ ನುಗ್ಗಿ ಹಾನಿ ಮಾಡುವ ದನಗಳನ್ನು ವಶಕ್ಕೆ ಪಡೆಯುವ ಅಧಿಕಾರ ತೋಟದ ಮಾಲಕರಿಗೆ ಇದೆ. ಇದಕ್ಕಾಗಿ ತೋಟದ ಮಾಲಕರು ಪೊಲೀಸರ ನೆರವು ಸಹ ಪಡೆಯಬಹುದು! ದನಗಳ ಅತಿಕ್ರಮಣ ಪ್ರವೇಶ ನಿಯಮ 1966ರ ಪ್ರಕಾರ ಜಾನುವಾರು ಮಾಲಕರು ದನಗಳನ್ನು ಜನರಿಗೆ ತೊಂದರೆ ನೀಡುವ ಹಾಗೇ ಬಿಟ್ಟಿದ್ದರೆ ಅದನ್ನು ಸರ್ಕಾರ ಸಹ ವಶಕ್ಕೆ ಪಡೆಯಬಹುದು. ಬೀಡಾಡಿ ದನಗಳನ್ನು ದೊಡ್ಡಿಗಳಲ್ಲಿಟ್ಟು ಅವುಗಳ ಆರೈಕೆ ಮಾಡುವ ಹೊಣೆ ಸರ್ಕಾರದ್ದಾಗಿದ್ದು, ಮಾಲಕರು ನಂತರ ನಿಯಗಳನ್ನು ಅನುಸರಿಸಿ ಆ ದನವನ್ನು ಬಿಡಿಸಿಕೊಳ್ಳಬಹುದು ಎಂದು ಕಾನೂನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಜನರ ಗದ್ದೆ-ತೋಟಗಳಿಗೆ ನುಗ್ಗುವ ಜಾನುವಾರುಗಳನ್ನು ಭೂಮಿಯ ಮಾಲಕ ವಶಕ್ಕೆ ಪಡೆದು ಅದನ್ನು 24 ಗಂಟೆಯ ಒಳಗೆ ಸರ್ಕಾರ ಸೂಚಿಸಿದ ದೊಡ್ಡಿಗೆ ಅಟ್ಟಬೇಕು ಎಂದು ಈ ಕಾನೂನು ಹೇಳುತ್ತದೆ. ಸಾರ್ವಜನಿಕ ಆಸ್ತಿಗಳನ್ನು ಹಾಳು ಮಾಡುವ ಜಾನುವಾರುಗಳನ್ನು ಸಾರ್ವಜನಿಕರು ಅಥವಾ ಪೊಲೀಸರು ವಶಕ್ಕೆ ಪಡೆಯಬಹುದು. ಅದನ್ನು ಸಹ ದೊಡ್ಡಿಗೆ ಕಳುಹಿಸಬೇಕು ಎಂಬುದು ನಿಯಮ. ಖಾಸಗಿ ಭೂಮಿ ಮಾಲಕರಿಗೆ ತೊಂದರೆ ನೀಡುತ್ತಿರುವ ದನಗಳನ್ನು ವಶಕ್ಕೆ ಪಡೆಯಲು ಪ್ರತಿಭಟನೆ ಉಂಟಾದಲ್ಲಿ ತಕ್ಷಣ ಪೊಲೀಸ್ ನೆರವು ಪಡೆಯಬಹುದು. ಪೊಲೀಸರು ಭೂ ಮಾಲಕರಿಗೆ ನೆರವು ನೀಡಬೇಕು ಎಂದು 1966ರ ಅಧಿನಿಯಮದಲ್ಲಿಯೇ ಸೂಚಿಸಲಾಗಿದೆ.

Advertisement. Scroll to continue reading.

ಮಾಲಕರಿಗೆ ದಂಡ
ದೊಡ್ಡಿಗೆ ಕಳುಹಿಸಿದ ಜಾನುವಾರುಗಳು ಅಗತ್ಯವಿದ್ದರೆ ಜಾನುವಾರು ಮಾಲಕರು ಸರ್ಕಾರ ಸೂಚಿಸಿದ ಜುಲ್ಮಾನೆ ಹಾಗೂ ಖರ್ಚು ವೆಚ್ಚ ಪಾವತಿಸಿದ ನಂತರ ತಮ್ಮ ದನಗಳನ್ನು ಬಿಡಿಸಿಕೊಳ್ಳಬಹುದು. ಅದಕ್ಕೂ ಮುನ್ನ ಆ ದನ ತನ್ನದು ಎಂದು ಆತ ಘೋಷಣಾ ಪತ್ರವನ್ನು ನೀಡಬೇಕು ಎನ್ನುತ್ತದೆ ಈ ಕಾನೂನು. ಇನ್ನೂ ಏಳು ದಿನಗಳ ಒಳಗೆ ಆ ಜಾನುವಾರನ್ನು ಮಾಲಕ ಒಯ್ಯದೇ ಇದ್ದರೆ ಅದನ್ನು ಹರಾಜು ಹಾಕುವ ಅಧಿಕಾರ ಸಹ ಸರ್ಕಾರಕ್ಕಿದೆ. ಆರು ತಿಂಗಳ ಒಳಗೆ ಆ ದನ ಮತ್ತೆ ರಂಪಾಟ ನಡೆಸಿ ದೊಡ್ಡಿಗೆ ಬಂದರೆ ಆ ಜಾನುವಾರು ಸರ್ಕಾರ ವಶಕ್ಕೆ ಪಡೆಯಲಿದೆ.

Advertisement. Scroll to continue reading.
Previous Post

ಕಲಿತ ಶಾಲೆಯಲ್ಲಿಯೇ ಸಾಧನೆ ಮಾಡಿದ ಶಿಕ್ಷಕ

Next Post

ಕನ್ನಡಗಲ್ ಕಾಡಿಗೆ ಎಲೆಮಾನವರ ಕಾಟ!

Next Post

ಕನ್ನಡಗಲ್ ಕಾಡಿಗೆ ಎಲೆಮಾನವರ ಕಾಟ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ