6
  • Latest

ಪೊಲೀಸ್ ಅಧೀಕ್ಷಕರ ಯೋಜನೆಯೇ ವಿಭಿನ್ನ: ಅಕ್ರಮ ಮರಳುಗಾರಿಗೆ ನಡೆಸುವವರಿಗೆ ಮಂಡೆಬಿಸಿ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪೊಲೀಸ್ ಅಧೀಕ್ಷಕರ ಯೋಜನೆಯೇ ವಿಭಿನ್ನ: ಅಕ್ರಮ ಮರಳುಗಾರಿಗೆ ನಡೆಸುವವರಿಗೆ ಮಂಡೆಬಿಸಿ!

AchyutKumar by AchyutKumar
September 28, 2024
in ಸ್ಥಳೀಯ
advt advt advt
ADVERTISEMENT

ಅಕ್ರಮ ಮರಳು ಅಡ್ಡೆ ನಡೆಸುವವರಿಗೆ ಪೊಲೀಸ್, ಅರಣ್ಯ, ಕಂದಾಯ ಸೇರಿ ಹಲವು ಇಲಾಖೆಯವರಿಗೆ ಮಾಮೂಲಿ ಸಲ್ಲಿಕೆಯಾಗುತ್ತದೆ ಎಂಬ ಆರೋಪವಿತ್ತು. ಇದೀಗ ಆ ಆರೋಪವನ್ನು ಯಾರೂ ಮಾಡುವ ಹಾಗಿಲ್ಲ. ಕಾರಣ ಅಕ್ರಮ ಮರಳುಗಾರಿಕೆ ನಡೆಸಲು ಆಯಾ ಸ್ಥಳಗಳಿಗೆ ಮರಳು ತುಂಬುವ ವಾಹನಗಳೇ ಹೋಗುತ್ತಿಲ್ಲ!

ಅಕ್ರಮ ಮರಳುಗಾರಿಕೆ ನಡೆಯುವ ಸ್ಥಳಗಳನ್ನು ಗುರುತಿಸಿದ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಆ ಸ್ಥಳಗಳಿಗೆ ತೆರಳುವ ರಸ್ತೆ ಮಾರ್ಗವಾಗಿ ಕಾಲುವೆ ನಿರ್ಮಿಸುತ್ತಿದ್ದಾರೆ. ಆ ಕಾಲುವೆ ದಾಟಿ ಮರಳು ಲಾರಿ ಹೋಗಲು ಸಾಧ್ಯವಿಲ್ಲ. ಹೀಗಾಗಿ ಅಕ್ರಮ ಅಡ್ಡೆಗಳೆಲ್ಲವೂ ಸ್ಥಗಿತವಾಗಿದೆ. ಇಷ್ಟು ವರ್ಷಗಳ ಕಾಲ ಅಕ್ರಮ ಮರಳುಗಾರಿಕೆ ತಡೆಯಲು ಗಣಿ ಮತ್ತು ಭೂ ವಿಜ್ಞಾನ ಸೇರಿ ಹಲವು ಇಲಾಖೆಯವರು ಕಸರತ್ತು ನಡೆಸಿದರೂ ಈ ಸುಲಭ ಮಾರ್ಗವನ್ನು ಯಾರೂ ಅನುಸರಿಸಿರಲಿಲ್ಲ!

ADVERTISEMENT
ADVERTISEMENT

ಮಟ್ಕಾ, ಇಸ್ಪಿಟ್ ಸೇರಿ ಜೂಜಾಟ ಆಡುವವರ ಮೇಲೆ ನಿರಂತರ ದಾಳಿ ನಡೆಸುತ್ತಿದ್ದ ಪೊಲೀಸರು ಕಳೆದ ಮೂರು ದಿನಗಳಿಂದ ಅಕ್ರಮ ಮರಳು ಅಡ್ಡೆಗಳ ಮೇಲೆ ನಿಗಾವಹಿಸಿದ್ದಾರೆ. ಪರಿಸರ ನಾಶದ ಜೊತೆ ರಸ್ತೆಗಳನ್ನು ಹಾಳು ಮಾಡುತ್ತಿರುವ ಮರಳು ಮಾಫಿಯಾದ ವಿರುದ್ಧ ಅವರು ಕಠಿಣ ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಕೆಲ ಭಾಗಗಳಲ್ಲಿ ಮಳೆಗಾಲದ ಅವಧಿಯಲ್ಲಿ ಸಹ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿ ಮರಳುಗಾರಿಕೆ ನಡೆಯುತ್ತಿದ್ದು, ಈ ಎಲ್ಲಾ ಅಕ್ರಮಗಳಿಗೆ ಕೊಂಚ ಕಡಿವಾಣ ಬಿದ್ದಿದೆ.

Advertisement. Scroll to continue reading.
Advertisement. Scroll to continue reading.

ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಗಾಳಿ, ಹಣಕೋಣ ಮಾರ್ಗದಲ್ಲಿ ಅಕ್ರಮ ಮರಳುಗಾರಿಕೆ ಜೋರಾಗಿತ್ತು. ಇದನ್ನು ಅರಿತ ಎಂ ನಾರಾಯಣ ಅವರು ಅಲ್ಲಿನ ಕಾಡು ರಸ್ತೆಗೆ ಅಡ್ಡಲಾಗಿ ಟ್ರೆಂಚ್ ನಿರ್ಮಿಸಿದ್ದಾರೆ. ಹೊನ್ನಾವರದ ಉಪ್ಪೊಣಿ, ನಗರ ಬಸ್ತಿಕೇರಿ, ಮೇಲಿನ ಮೂಡ್ಕಣಿ, ಕೆಳಗಿನ ಮೂಡ್ಕಣಿ, ಗೇರುಸೊಪ್ಪದಲ್ಲಿ ಸಹ ಅಕ್ರಮ ಮರಳುಗಾರಿಕೆ ಸಾಧ್ಯತೆ ಹಿನ್ನಲೆ ಅಲ್ಲಿ ಸಹ ಕಾಲುವೆ ನಿರ್ಮಾಣ ಕೆಲಸ ನಡೆದಿದೆ. ಕಳಸಿನ ಮೀಟೆಯಲ್ಲಿ ಅಕ್ರಮ ಮರಳುಗಾರಿಕೆಗೆಗೂ ತಡೆ ಒಡ್ಡಲಾಗಿದೆ.

ಕುಮಟಾ ತಾಲೂಕಿನ ದಿವಿಗಿ, ಮಿರ್ಜಾನ್, ಕೋಡ್ಕಣಿ ಹೆಗಡೆ ಹಾಗೂ ಮಾಸೂರಿನಲ್ಲಿ ಮರಳುಗಾರಿಕೆ ನಡೆಸುವವರ ಮೇಲೆ ನಿಗಾ ಇರಿಸಲಾಗಿದ್ದು, ಆ ಭಾಗದಲ್ಲಿಯೂ ಮರಳುಗಾರಿಕೆ ಪ್ರದೇಶದಲ್ಲಿ ಟ್ರೆಂಚ್ ನಿರ್ಮಾಣ ಕಾರ್ಯ ನಡೆದಿದೆ. ಹೊನ್ನಾವರದ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಕಟ್ಟೆಚ್ಚರವಹಿಸಲಾಗಿದೆ. ಈ ಎಲ್ಲಾ ಹಿನ್ನಲೆ ಅಕ್ರಮ ಮರಳುಗಾರಿಕೆ ನಡೆಸುವವರು ತಲೆಬಿಸಿಯಲ್ಲಿದ್ದಾರೆ.

ShareSendTweetShare
ADVERTISEMENT
Previous Post

ಪತ್ನಿ ಮಗ ಇದ್ದರೂ ಈತ ಅನಾಥ!

Next Post

ಒತ್ತಡದ ಬದುಕಿಗೆ ಹೇಳಿ ಕೊಂಚ ವಿರಾಮ: ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿ ಕಿವಿಮಾತು

Next Post

ಒತ್ತಡದ ಬದುಕಿಗೆ ಹೇಳಿ ಕೊಂಚ ವಿರಾಮ: ಸರ್ಕಾರಿ ನೌಕರರಿಗೆ ಜಿಲ್ಲಾಧಿಕಾರಿ ಕಿವಿಮಾತು

ಬಂಗಾರ ಗೆದ್ದ ಸುಪ್ರಜಾ

ಬುಡಕಟ್ಟು ಗ್ರಾಮಕ್ಕೆ ಪ್ರಧಾನಿ ಕೊಡುಗೆ: 31 ಗ್ರಾಮಗಳ ಅಭಿವೃದ್ಧಿಗೆ ಪಣ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.