6
  • Latest

ಬಸ್ ಪಂಚರ್ ತೆಗೆದ ಗಸ್ತು ಪೊಲೀಸರು!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಬಸ್ ಪಂಚರ್ ತೆಗೆದ ಗಸ್ತು ಪೊಲೀಸರು!

AchyutKumar by AchyutKumar
October 23, 2024
in ಸ್ಥಳೀಯ
advt advt advt
ADVERTISEMENT

ಕುಮಟಾ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್ಸು ಪಂಚರ್ ಆಗಿದ್ದು, ಅದೇ ಮಾರ್ಗದಲ್ಲಿ ಸಂಚರಿಸುತ್ತ ಪೊಲೀಸರು ಬಸ್ಸಿನ ಚಕ್ರ ಬದಲಿಸಿ ಮಕ್ಕಳು ಕತ್ತಲಾಗುವ ಮುನ್ನ ಮನೆ ಸೇರುವಂತೆ ಮಾಡಿದರು. ಆ ಕ್ಷಣಕ್ಕೆ ಪೊಲೀಸರು ಬಾರದೇ ಇದ್ದಿದ್ದರೆ ರಾತ್ರಿ 9 ಗಂಟೆ ಆದರೂ ಮಕ್ಕಳು ಮನೆ ಸೇರುತ್ತಿರಲಿಲ್ಲ!

ಅಕ್ಟೊಬರ್ 23ರ ಸಂಜೆ 5.30ರ ವೇಳೆಗೆ ಕುಮಟಾ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರ ಮಕ್ಕಳನ್ನು ಹೊತ್ತು ಕತಗಾಲ ಮಾರ್ಗವಾಗಿ ಬಸ್ಸು ಹೊರಟಿತ್ತು. ಅಂತ್ರವಳ್ಳಿ ಬಳಿ 6 ಗಂಟೆ ವೇಳೆಗೆ ಬಸ್ಸಿನ ಹಿಂದಿನ ಚಕ್ರ ಪಂಚರ್ ಆಗಿದ್ದು, ಬಸ್ಸಿನಲ್ಲಿ ಚಾಲಕನನ್ನು ಹೊರತುಪಡಿಸಿ ಬೇರೆ ಗಂಡಸು ಇರಲಿಲ್ಲ. ಮಕ್ಕಳನ್ನು ನೋಡಿಕೊಳ್ಳುವ ಮಹಿಳಾ ಸಹಾಯಕರಿದ್ದರೂ ಅವರು ಬಸ್ಸಿನ ಚಕ್ರ ಬದಲಿಸುವಷ್ಟು ಶಕ್ತರಾಗಿರಲಿಲ್ಲ.

Advertisement. Scroll to continue reading.
ADVERTISEMENT
ADVERTISEMENT

ಕತ್ತಲಾಗುವ ಮುನ್ನ ಮನೆ ಸೇರಬೇಕು ಎಂಬ ನಿಟ್ಟಿನಲ್ಲಿ ಮಕ್ಕಳು ಕಳವಳ ವ್ಯಕ್ತಪಡಿಸುತ್ತಿದ್ದರು. ಅದೇ ಸಮಯಕ್ಕೆ ಶಿರಸಿ – ಕುಮಟಾ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹೈವೆ ಪೆಟ್ರೋಲ್ ಪೊಲೀಸರು ಚಾಲಕನ ಬಳಿ ಬಸ್ಸಿನ ಸಮಸ್ಯೆ ಆಲಿಸಿದರು. ಪೊಲೀಸ್ ಕಾನ್ಸ್ಟೇಬಲ್ ಕಿರಣ ನಾಯ್ಕ ಸಮವಸ್ತ್ರದಲ್ಲಿಯೇ ಜಾಕ್ ಏರಿಸಿ, ಪಂಚರ್ ಆದ ಚಕ್ರ ತೆಗೆದರು. ಹೈವೇ ಪೆಟ್ರೋಲ್ ವಾಹನದ ಚಾಲಕ ದೇವಾನಂದ ನಾಯ್ಕ ಸಹ ಇನ್ನೊಂದು ಚಕ್ರ ತಂದು ಬಸ್ಸಿಗೆ ಜೋಡಿಸಿದರು. ಅಂದಾಜು 30 ನಿಮಿಷದ ನಂತರ ಬಸ್ಸು ಅಲ್ಲಿಂದ ಚಲಿಸಿ, ಮಕ್ಕಳನ್ನು ಮನೆಗೆ ಮುಟ್ಟಿಸಿತು. ಆ ಬಸ್ಸಿನಲ್ಲಿ ಅಂದಾಜು 20 ಮಕ್ಕಳಿದ್ದರು. ಹೆಬೈಲ್ ಹಾಗೂ ಕತಗಾಲಗೆ ಅವರು ತೆರಳುವವರಿದ್ದರು. ಬಸ್ ಪಂಚರ್ ಆದ ಪರಿಣಾಮ ಒಂದು ತಾಸು ತಡವಾಗಿ ಮನೆಗೆ ಮುಟ್ಟಿದರು.

Advertisement. Scroll to continue reading.

`ಹೈವೆ ಪೆಟ್ರೋಲಿನವರು ಹಣ ಮಾಡಲು ಮಾತ್ರ ಸೀಮಿತ’ ಎಂದು ಈಚೆಗೆ ಕುಮಟಾ ಶಾಸಕ ದಿನಕರ ವಿಧಾನಸಭಾ ಅಧಿವೇಶನದಲ್ಲಿ ಗುಡುಗಿದ್ದು, ಅದಕ್ಕೆ ವಿರುದ್ಧವಾಗಿ ಮಕ್ಕಳ ಸೇವೆ ಮಾಡುವ ಮೂಲಕ ಪೊಲೀಸರು ಸಾರ್ವಜನಿಕರ ಮೆಚ್ಚುಗೆಗಳಿಸಿದರು. `ಮಕ್ಕಳು ಇನ್ನೂ ಮನೆಗೆ ಬರಲಿಲ್ಲ’ ಎಂಬ ಪಾಲಕರ ಆತಂಕವನ್ನು ಪೊಲೀಸರು ದೂರ ಮಾಡಿದರು.

ShareSendTweetShare
ADVERTISEMENT
Previous Post

BSNL ಜೊತೆ ನೀವು ಅಪ್‌ಗ್ರೇಡ್ ಆಗಿ: ಈ ಕೆಲಸ ಮಾಡದಿದ್ದರೆ ನಿಮ್ಮ ಫೋನ್ ಇದ್ದೂ ಪ್ರಯೋಜನವಿಲ್ಲ!

Next Post

ಕಾನೂನು ಮಾಹಿತಿ | ನಾಯಿ ಕಚ್ಚಿದರೂ ಸಿಗುತ್ತೆ ಪರಿಹಾರ!

Next Post

ಕಾನೂನು ಮಾಹಿತಿ | ನಾಯಿ ಕಚ್ಚಿದರೂ ಸಿಗುತ್ತೆ ಪರಿಹಾರ!

ರಸ್ತೆ ಸುರಕ್ಷತೆಗೆ ಅಧಿಕಾರಿಗಳ ಅಸಡ್ಡೆ: ಜಿಲ್ಲಾಧಿಕಾರಿಗೆ ದೂರು

ಸರ್ಕಾರಿ ಕಂಪ್ಯುಟರ್ ಮೇಲೆ ಚೀನಾ ದಾಳಿ: ಕಣ್ಣಿಗೆ ಕಾಣದ ವೈರಸ್ ವಿರುದ್ಧ ಅಧಿಕಾರಿ ದೂರು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.