6
  • Latest

ಕಾಸು ಕೊಟ್ಟರೆ ಮಾತ್ರ ಅನುಮತಿ: ಒಂಟಿ ಒಂಟಿಯಾಗಿರುವ ಒಂಟೆ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಕಾಸು ಕೊಟ್ಟರೆ ಮಾತ್ರ ಅನುಮತಿ: ಒಂಟಿ ಒಂಟಿಯಾಗಿರುವ ಒಂಟೆ!

AchyutKumar by AchyutKumar
in ದೇಶ - ವಿದೇಶ

ಕುಮಟಾ: ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿನಿ0ದ ಒಂಟೆಗಳನ್ನು ಕಟ್ಟಲಾಗಿದೆ. ಪ್ರವಾಸಿಗರನ್ನು ಹೊತ್ತು ಕಡಲ ತೀರದಲ್ಲಿ ಸಂಚಾರ ನಡೆಸಲು ಒಂಟೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ!

ADVERTISEMENT

ಕಡಲತೀರಕ್ಕೆ ಆಗಮಿಸುವ ಕೆಲವರು ಎತ್ತರದ ಒಂಟೆಗಳ ಮೇಲೆ ಕುಳಿತು ತಿರುಗಾಟ ಮಾಡಲು ಬಯಸುತ್ತಾರೆ. ಒಂಟೆಗಳ ಮೇಲೆ ಮಕ್ಕಳನ್ನು ಕೂರಿಸಿ ಸಮುದ್ರದ ಗಾಳಿ ಅನುಭವಿಸುತ್ತಾರೆ. ಪ್ರವಾಸಿಗರು ನೀಡುವ ಹಣದಿಂದ ಮಾಲಕರು ಒಂಟೆಗಳನ್ನು ಸಾಕುತ್ತಾರೆ. ಅದೇ ಹಣವನ್ನು ಉಳಿಸಿ ಅವರು ಜೀವನ ನಡೆಸುತ್ತಿದ್ದರು. ಆದರೆ, ಒಂಟೆ ತಂದು ತಿಂಗಳಾದರೂ ಸಂಚಾರಕ್ಕೆ ಅನುಮತಿ ಸಿಗದ ಕಾರಣ ಒಂಟೆಯ ಆಹಾರಕ್ಕೂ ಮಾಲಕರು ತೊಂದರೆ ಅನುಭವಿಸುತ್ತಿದ್ದಾರೆ.

ಕಾಸು ಕೊಟ್ಟರೆ ಮಾತ್ರ ಅನುಮತಿ!
ಕಡಲ ತೀರದಲ್ಲಿ ಒಂಟೆ ಸಂಚಾರಕ್ಕೆ ಮೊದಲು ವಾರ್ಷಿಕ 12 ಸಾವಿರ ರೂ ಪಾವತಿಸಬೇಕಿತ್ತು. ಇದಕ್ಕೆ ಗ್ರಾ ಪಂ ಅಧಿಕೃತ ರಸೀದಿಯನ್ನು ನೀಡುತ್ತಿತ್ತು. ಅದನ್ನು ಒಂಟೆ ಸಾಕಾಣಿಕೆದಾರರು ಪಾವತಿಸುತ್ತಿದ್ದರು. ಆದರೆ, ಇದೀಗ `ತಿಂಗಳುಗಳ ಕಾಲ ಒಂಟೆ ಓಡಾಡಿಸದೇ ಇದ್ದರೆ ನಿಮಗೆ ಲಕ್ಷಾಂತರ ರೂ ನಷ್ಟವಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ ನಮಗೆ ಪ್ರತಿ ತಿಂಗಳು 15 ಸಾವಿರ ಕೊಡಿ. ತಕ್ಷಣ ಅನುಮತಿ ಸಿಗುತ್ತದೆ’ ಎಂದು ಅಧಿಕಾರಿಯೊಬ್ಬರು ಸ್ಥಳೀಯರೊಬ್ಬರ ಮೂಲಕ ಒಂಟೆ ಮಾಲಕರನ್ನು ಮಾತನಾಡಿಸಿದ್ದಾರೆ.

Advertisement. Scroll to continue reading.

ಆದರೆ, `ಅಷ್ಟೊಂದು ಹಣ ಕೊಡಲು ಆಗುವುದಿಲ್ಲ’ ಎಂದು ಒಂಟೆ ಸಾಕುವವರು ಚೌಕಾಸಿ ಮಾಡಿದ್ದಾರೆ. `ಕಾಸು ಕೊಡುವವರೆಗೂ ಅನುಮತಿ ಕೊಡಲ್ಲ’ ಎಂದು ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಪ್ರಶ್ನಿಸಿದವರಿಗೆ `ಗ್ರಾ ಪಂ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಆಗಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ’ ಎನ್ನುತ್ತ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ.

Advertisement. Scroll to continue reading.

ಒಂಟೆ ಮಾಲಕರು ಕಾರವಾರದ ಪ್ರವಾಸೋದ್ಯಮ ಕಚೇರಿಗೆ ತೆರಳಿ ತಮ್ಮ ಸಮಸ್ಯೆ ವಿವರಿಸಿದ್ದಾರೆ. ಪ್ರಾಣಿ ಹಿಂಸೆ ಆಗದ ರೀತಿ ನಿಬಂಧನೆಗೆ ಒಳಪಟ್ಟು ಅನುಮತಿ ಕೊಡಿಸುವುದಾಗಿ ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಪ್ರಸ್ತುತ 4 ಒಂಟೆ ಹಾಗೂ 1 ಕುದುರೆ ಕಡಲತೀರದಲ್ಲಿ ನಿಂದಿದೆ. ತಿಂಗಳು ಕಳೆದರೂ ಅವುಗಳ ಸಂಚಾರಕ್ಕೆ ಅನುಮತಿ ಸಿಕ್ಕಿಲ್ಲ. ಒಂಟೆ ಮಾಲಕರು ಬಿಸಿಲಿನಲ್ಲಿ ಕಾಯುವುದು ತಪ್ಪಿಲ್ಲ!

Previous Post

ಯಲ್ಲಾಪುರ ನ್ಯೂಸ್: ಪತ್ರಕರ್ತ ಜಗದೀಶ ನಾಯ್ಕ ಇನ್ನಿಲ್ಲ

Next Post

ಮಕರಂದ ಸವಿದ ರಮೇಶ ಅರವಿಂದ!

Next Post
Film actor Ramesh Aravinda who tasted honey

ಮಕರಂದ ಸವಿದ ರಮೇಶ ಅರವಿಂದ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ