6
  • Latest

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

AchyutKumar by AchyutKumar
in ವಿಡಿಯೋ

ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ ಕಾಳಜಿ ಹಾಗೂ ಕನಿಕರ ಅಧಿಕಾರಿಗಳಿಗೆ ಇಲ್ಲ!

ADVERTISEMENT

ಮಂಗಳವಾರ ತಾ ಪಂ ಸಭಾ ಭವನದಲ್ಲಿ ಗ್ಯಾರಂಟಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರು ಮಾತನಾಡುವಾಗ ಒಬ್ಬರೇ ಒಬ್ಬ ಅಧಿಕಾರಿಗಳು ಭಾಗವಹಿಸಿರಲಿಲ್ಲ. ನಾಲ್ಕು ದಿನ ಮೊದಲೇ ಅಧಿಕಾರಿಗಳಿಗೆ ಸಭೆಗೆ ಆಗಮಿಸುವ ಬಗ್ಗೆ ಆಮಂತ್ರಿಸಲಾಗಿತ್ತು. ಆದರೆ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಅನುಷ್ಠಾನ ಸಭೆಗೆ ಬರಲು ಅಧಿಕಾರಿಗಳು ಆಸಕ್ತರಾಗಿರಲಿಲ್ಲ. `ಒಬ್ಬರು ತಾನು ಕಾರವಾರಕ್ಕೆ ಹೋಗಬೇಕು’ ಎಂದು ಬರಲಿಲ್ಲ. ಇನ್ನೊಬ್ಬರು `ಕಿರವತ್ತಿಗೆ ಹೋಗಬೇಕು’ ಎಂಬ ಕಾರಣ ನೀಡಿದರು. ಅಧಿಕಾರಿಗಳಿಗೆ ಆಮಂತ್ರಣ ನೀಡಿದ್ದ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ತಾ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಸಹ ಅಧ್ಯಕ್ಷರ ಭಾಷಣದ ವೇಳೆ ಅಲ್ಲಿರಲಿಲ್ಲ. `ಜಿಲ್ಲಾ ಪಂಚಾಯತ ಅಧಿಕಾರಿಗಳು ಬಂದಿದ್ದಾರೆ’ ಎಂದು ಹೇಳಿ ಅವರು ಅಲ್ಲಿಂದ ತಪ್ಪಿಸಿಕೊಂಡರು!

ಸಭೆ ಶುರುವಾಗುವ ಮುನ್ನ ಅಧ್ಯಕ್ಷರನ್ನು ಒಳಗೊಂಡು 8 ಜನ ಗ್ಯಾರಂಟಿ ಸಮಿತಿ ಸದಸ್ಯರಿದ್ದರು. ಅದರಲ್ಲಿ ಒಬ್ಬರು `ಫೋನ್ ಬಂತು’ ಎಂದು ಅಲ್ಲಿಂದ ಹೊರಬಿದ್ದರು. ಹೊರಡುವ ಮುನ್ನ ಎಲ್ಲರೂ ಸೇರಿ ಸಭೆಗೆ ಹಾಜರಾದ ಸಾಕ್ಷಿಗಾಗಿ ಫೋಟೋ ತೆಗೆಸಿಕೊಂಡರು. ಕೊನೆಗೆ ಮೂವರು ಪತ್ರಕರ್ತರು, ಐವರು ಗ್ಯಾರಂಟಿ ಸಮಿತಿ ಸದಸ್ಯರು ಮಾತ್ರ ಸಭೆಯಲ್ಲಿದ್ದು 40ಕ್ಕೂ ಅಧಿಕ ಖಾಲಿ ಖುರ್ಚಿಗಳ ಮುಂದೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್ ಸುದೀರ್ಘ ಭಾಷಣ ಮಾಡಿದರು. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಯ ಬಗ್ಗೆ ಅವರು ಕೊಂಡಾಡಿದರು.

Advertisement. Scroll to continue reading.

ಹೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದ ಶಿಶು ಅಭಿವೃದ್ಧಿ, ಆಹಾರ ಇಲಾಖೆ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಸಭೆಗೆ ಹಾಜರಾಗಬೇಕಿತ್ತು. ಅದರ ಜೊತೆ ಗ್ಯಾರಂಟಿ ಸಮಿತಿಯ ಸದಸ್ಯರು ಸಭೆಯಲ್ಲಿರಬೇಕಿತ್ತು. ಆದರೆ, ಫೋನ್ ಬಂದಾಗ ಎದ್ದು ಹೋದವರನ್ನು ಸೇರಿ ಸಮಿತಿಯ ಟಿಸಿ ಗಾಂವ್ಕರ್, ಬಾಬಾ ಜಾನ್ ಶೇಖ್, ಅನಿಲ ಮರಾಠೆ, ಪಕೀರ ಶಿವಪ್ಪ ಹರಿಜನ, ಮುಶ್ರತ್ ಶೇಖ್, ಅನಂತ ಕೋಟೆಮನೆ ಸಭೆಯಲ್ಲಿದ್ದರು.

Advertisement. Scroll to continue reading.

`ಗ್ಯಾರಂಟಿ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗುತ್ತಿರುವುದು ಇದೇ ಮೊದಲು. ಅದಾಗಿಯೂ ಕೆಲ ಇಲಾಖೆಯವರು ಸಭೆ ಮುಗಿದ ನಂತರ ತಮ್ಮ ಇಲಾಖೆ ಪ್ರಗತಿ ಬಗ್ಗೆ ವರದಿ ಸಲ್ಲಿಸಿದ್ದಾರೆ. ಮುಂದಿನ ಸಭೆಗೆ ಗೈರಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವೆ. ಫಲಾನುಭವಿಗಳಿಗೆ ತೊಂದರೆ ಆಗಲು ಬಿಡುವುದಿಲ್ಲ’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಸಮಜಾಯಿಶಿ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಭೆ ಹೇಗಾಯ್ತು? ಅಧ್ಯಕ್ಷರು ಏನೆಂದರು? ವಿಡಿಯೋ ಇಲ್ಲಿ ನೋಡಿ..

Previous Post

ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!

Next Post

ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!

Next Post

ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ