6
  • Latest

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಖಾಲಿ ಖುರ್ಚಿ ಮುಂದೆ ಗ್ಯಾರಂಟಿ ಅಧ್ಯಕ್ಷರ ಭಾಷಣ!

AchyutKumar by AchyutKumar
October 29, 2024
in ವಿಡಿಯೋ
advt advt advt
ADVERTISEMENT

ಯಲ್ಲಾಪುರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸಲು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಉಲ್ಲಾಸ ಶಾನಭಾಗ ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ, ಅವರಿಗಿರುವ ಕಾಳಜಿ ಹಾಗೂ ಕನಿಕರ ಅಧಿಕಾರಿಗಳಿಗೆ ಇಲ್ಲ!

ಮಂಗಳವಾರ ತಾ ಪಂ ಸಭಾ ಭವನದಲ್ಲಿ ಗ್ಯಾರಂಟಿ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ಅಧ್ಯಕ್ಷರು ಮಾತನಾಡುವಾಗ ಒಬ್ಬರೇ ಒಬ್ಬ ಅಧಿಕಾರಿಗಳು ಭಾಗವಹಿಸಿರಲಿಲ್ಲ. ನಾಲ್ಕು ದಿನ ಮೊದಲೇ ಅಧಿಕಾರಿಗಳಿಗೆ ಸಭೆಗೆ ಆಗಮಿಸುವ ಬಗ್ಗೆ ಆಮಂತ್ರಿಸಲಾಗಿತ್ತು. ಆದರೆ, ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳ ಅನುಷ್ಠಾನ ಸಭೆಗೆ ಬರಲು ಅಧಿಕಾರಿಗಳು ಆಸಕ್ತರಾಗಿರಲಿಲ್ಲ. `ಒಬ್ಬರು ತಾನು ಕಾರವಾರಕ್ಕೆ ಹೋಗಬೇಕು’ ಎಂದು ಬರಲಿಲ್ಲ. ಇನ್ನೊಬ್ಬರು `ಕಿರವತ್ತಿಗೆ ಹೋಗಬೇಕು’ ಎಂಬ ಕಾರಣ ನೀಡಿದರು. ಅಧಿಕಾರಿಗಳಿಗೆ ಆಮಂತ್ರಣ ನೀಡಿದ್ದ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ತಾ ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜೇಶ ಧನವಾಡಕರ್ ಸಹ ಅಧ್ಯಕ್ಷರ ಭಾಷಣದ ವೇಳೆ ಅಲ್ಲಿರಲಿಲ್ಲ. `ಜಿಲ್ಲಾ ಪಂಚಾಯತ ಅಧಿಕಾರಿಗಳು ಬಂದಿದ್ದಾರೆ’ ಎಂದು ಹೇಳಿ ಅವರು ಅಲ್ಲಿಂದ ತಪ್ಪಿಸಿಕೊಂಡರು!

ADVERTISEMENT
ADVERTISEMENT

ಸಭೆ ಶುರುವಾಗುವ ಮುನ್ನ ಅಧ್ಯಕ್ಷರನ್ನು ಒಳಗೊಂಡು 8 ಜನ ಗ್ಯಾರಂಟಿ ಸಮಿತಿ ಸದಸ್ಯರಿದ್ದರು. ಅದರಲ್ಲಿ ಒಬ್ಬರು `ಫೋನ್ ಬಂತು’ ಎಂದು ಅಲ್ಲಿಂದ ಹೊರಬಿದ್ದರು. ಹೊರಡುವ ಮುನ್ನ ಎಲ್ಲರೂ ಸೇರಿ ಸಭೆಗೆ ಹಾಜರಾದ ಸಾಕ್ಷಿಗಾಗಿ ಫೋಟೋ ತೆಗೆಸಿಕೊಂಡರು. ಕೊನೆಗೆ ಮೂವರು ಪತ್ರಕರ್ತರು, ಐವರು ಗ್ಯಾರಂಟಿ ಸಮಿತಿ ಸದಸ್ಯರು ಮಾತ್ರ ಸಭೆಯಲ್ಲಿದ್ದು 40ಕ್ಕೂ ಅಧಿಕ ಖಾಲಿ ಖುರ್ಚಿಗಳ ಮುಂದೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ್ ಸುದೀರ್ಘ ಭಾಷಣ ಮಾಡಿದರು. ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಮಾಡಿದ ಸಾಧನೆಯ ಬಗ್ಗೆ ಅವರು ಕೊಂಡಾಡಿದರು.

Advertisement. Scroll to continue reading.
Advertisement. Scroll to continue reading.

ಹೆಸ್ಕಾಂ, ಕೆಎಸ್‌ಆರ್‌ಟಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನದ ಶಿಶು ಅಭಿವೃದ್ಧಿ, ಆಹಾರ ಇಲಾಖೆ ಹಾಗೂ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಈ ಸಭೆಗೆ ಹಾಜರಾಗಬೇಕಿತ್ತು. ಅದರ ಜೊತೆ ಗ್ಯಾರಂಟಿ ಸಮಿತಿಯ ಸದಸ್ಯರು ಸಭೆಯಲ್ಲಿರಬೇಕಿತ್ತು. ಆದರೆ, ಫೋನ್ ಬಂದಾಗ ಎದ್ದು ಹೋದವರನ್ನು ಸೇರಿ ಸಮಿತಿಯ ಟಿಸಿ ಗಾಂವ್ಕರ್, ಬಾಬಾ ಜಾನ್ ಶೇಖ್, ಅನಿಲ ಮರಾಠೆ, ಪಕೀರ ಶಿವಪ್ಪ ಹರಿಜನ, ಮುಶ್ರತ್ ಶೇಖ್, ಅನಂತ ಕೋಟೆಮನೆ ಸಭೆಯಲ್ಲಿದ್ದರು.

`ಗ್ಯಾರಂಟಿ ಸಮಿತಿ ಸಭೆಗೆ ಅಧಿಕಾರಿಗಳು ಗೈರಾಗುತ್ತಿರುವುದು ಇದೇ ಮೊದಲು. ಅದಾಗಿಯೂ ಕೆಲ ಇಲಾಖೆಯವರು ಸಭೆ ಮುಗಿದ ನಂತರ ತಮ್ಮ ಇಲಾಖೆ ಪ್ರಗತಿ ಬಗ್ಗೆ ವರದಿ ಸಲ್ಲಿಸಿದ್ದಾರೆ. ಮುಂದಿನ ಸಭೆಗೆ ಗೈರಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವೆ. ಫಲಾನುಭವಿಗಳಿಗೆ ತೊಂದರೆ ಆಗಲು ಬಿಡುವುದಿಲ್ಲ’ ಎಂದು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಲ್ಲಾಸ ಶಾನಭಾಗ ಸಮಜಾಯಿಶಿ ನೀಡಿದರು.

ಗ್ಯಾರಂಟಿ ಅನುಷ್ಠಾನ ಸಭೆ ಹೇಗಾಯ್ತು? ಅಧ್ಯಕ್ಷರು ಏನೆಂದರು? ವಿಡಿಯೋ ಇಲ್ಲಿ ನೋಡಿ..

ShareSendTweetShare
ADVERTISEMENT
Previous Post

ಯಲ್ಲಾಪುರ | ನೊಂದಣಿ ಕಾರ್ಯ ಸಂಪೂರ್ಣ ಸ್ಥಗಿತ: ಕೋಟಿ ಕಾಸಿದ್ದರೂ 30 ಸಾವಿರ ಕೊಡಲಿಲ್ಲ!

Next Post

ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!

Next Post

ದ್ವೇಷಕ್ಕೆ ದ್ವೇಷ.. ದೂರಿಗೆ ದೂರು: ಐದು ರಸ್ತೆ ಬಳಿ ಐವರ ಹೊಡೆದಾಟ ವಿಡಿಯೋ ವೈರಲ್!

ಆಯುಷ್ಮಾನ್ ಕೇಂದ್ರದಲ್ಲಿ ಪುನೀತ್ ರಾಜಕುಮಾರರ ಸ್ಮರಣೆ: ನೇತ್ರದಾನಕ್ಕೆ ಕರೆ ನೀಡಿದ ಆರೋಗ್ಯಾಧಿಕಾರಿ

Dr Bro company's coastal tour A new direction for Uttara Kannada tourism! gopravasa

`ಡಾ ಬ್ರೋ' ಕಂಪನಿಯ ಕರಾವಳಿ ಪ್ರವಾಸ: ಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.