6
  • Latest

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಕ್ಕನ ಮನೆಗೆ ನುಗ್ಗಿ ರಂಪಾಟ: ರಾಜಿಗೆ ಬಂದವ ರಾಡಿನಿಂದ ಹೊಡೆದ!

AchyutKumar by AchyutKumar
October 30, 2024
in ಸ್ಥಳೀಯ
advt advt advt
ADVERTISEMENT

ಯಲ್ಲಾಪುರ: ಇಡಗುಂದಿಯ ಗಣೇಶ ಸಿದ್ದಿ ಎಂಬಾತ ಆತನ ಅಕ್ಕ ಶೀಲಾ ಸಿದ್ದಿ ಅವರ ಮನೆಗೆ ನುಗ್ಗಿ ರಂಪಾಟ ನಡೆಸಿದ್ದಾನೆ. ಅಕ್ಕನ ಕೈ ಬೆರಳು ಕಚ್ಚಿದ ಆತ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಕೊಲೆ ಪ್ರಯತ್ನವನ್ನು ಮಾಡಿದ್ದಾನೆ.

ಗಣೇಶ ಪೆದ್ರು ಸಿದ್ದಿ (30) ವೃತ್ತಿಯಲ್ಲಿ ಚಾಲಕ. ಆತನಿಗೆ ಗೀತಾ ರವೀಂದ್ರ ಸಿದ್ದಿ (35) ಹಾಗೂ ಶೀಲಾ ಕೃಷ್ಣ ಸಿದ್ದಿ (36) ಎಂಬ ಇಬ್ಬರು ಅಕ್ಕಂದಿರು. ಇಬ್ಬರ ಜೊತೆಯೂ ಆತ ಪದೇ ಪದೇ ಜಗಳ ಮಾಡುತ್ತಿದ್ದ. 2022ರಲ್ಲಿ ಆತ ದೊಡ್ಡದಾಗಿ ಜಗಳ ಮಾಡಿದ ಕಾರಣ ಶೀಲಾ ಸಿದ್ದಿ ಪೊಲೀಸ್ ದೂರು ನೀಡಿದ್ದರು. ಆ ದೂರು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆ ದೂರಿಗೆ ಸಂಬAಧಿಸಿ `ರಾಜಿ ಮಾಡಿಕೊಳ್ಳೋಣ’ ಎಂದು ಗಣೇಶ ಸಿದ್ದಿ ಅಕ್ಕನಲ್ಲಿ ಹೇಳಿಕೊಂಡಿದ್ದ. ಆದರೆ, ಶೀಲಾ ಸಿದ್ದಿ ಇದಕ್ಕೆ ಒಪ್ಪಿರಲಿಲ್ಲ.

ADVERTISEMENT
ADVERTISEMENT

ತನ್ನ ವಿರುದ್ಧ ಪ್ರಕರಣ ದಾಖಲಿಸಿದ ಕಾರಣ ಶೀಲಾ ಸಿದ್ದಿ ಅವರನ್ನು ಗಣೇಶ ಸಿದ್ದಿ ದುರುಗುಟ್ಟಿ ನೋಡುತ್ತಿದ್ದ. ಸಿಕ್ಕಾಗಲೆಲ್ಲ ಕೆಟ್ಟದಾಗಿ ಬಯ್ಯುತ್ತಿದ್ದ. ಅಕ್ಟೊಬರ್ 30ರ ಬೆಳಗ್ಗೆ 5 ಗಂಟೆಗೆ ಶೀಲಾ ಸಿದ್ದಿ ಅವರ ಮನೆಗೆ ಗಣೇಶ ಸಿದ್ದಿ ನುಗ್ಗಿ ರಂಪಾಟ ನಡೆಸಿದ್ದ. ಅಕ್ಕನ ಬಲಗೈ ಹೆಬ್ಬರಳನ್ನು ಕಚ್ಚಿ ಗಾಯಗೊಳಿಸಿದ್ದ. ಜೊತೆಗೆ ಕಬ್ಬಿಣದ ರಾಡಿನಿಂದ ಶೀಲಾ ಸಿದ್ದಿ ಅವರ ತಲೆ ಮೇಲೆ ಹೊಡೆದು ಕೊಲೆ ಪ್ರಯತ್ನವನ್ನು ಮಾಡಿದ್ದ.

Advertisement. Scroll to continue reading.

ಗಾಯಗೊಂಡ ಶೀಲಾ ಸಿದ್ದಿ ಅವರನ್ನು ಅವರ ತಾಯಿ ಜಾನಕಿ ಸಿದ್ದಿ ಹಾಗೂ ಪತಿ ಕೃಷ್ಣ ಸಿದ್ದಿ ರಕ್ಷಿಸಿದರು. ಜೊತೆಗೆ ಕಬ್ಬಿಣದ ರಾಡ್ ಹಿಡಿದು ನಿಂತಿದ್ದ ಕೃಷ್ಣಾ ಸಿದ್ದಿಯನ್ನು ಸುಮ್ಮನಿರಿಸುವ ಪ್ರಯತ್ನ ನಡೆಸಿದ್ದರು. ಆದರೆ, ಈ ವೇಳೆ ಅಲ್ಲಿಯೇ ಇದ್ದ ಇನ್ನೊಬ್ಬ ಅಕ್ಕ ಗೀತಾ ಸಿದ್ದಿ ಅವರ ಮೇಲೆ ಕೃಷ್ಣ ಸಿದ್ದಿ ಕೈ ಮಾಡಿದ್ದ. ಜಗಳ ಬಿಡಿಸಲು ಬಂದವರನ್ನು ಸಹ ದೂಡಾಡಿದ್ದ. ಇದರೊಂದಿಗೆ ಮನೆಯ ಸಾಮಗ್ರಿಗಳನ್ನು ಸಹ ಒಡೆದು ಹಾಕಿ ಹಾನಿ ಮಾಡಿದ.

Advertisement. Scroll to continue reading.

ಈ ಎಲ್ಲಾ ಹಿನ್ನಲೆ ಇಡಗುಂದಿಯ ಜನತಾ ಕಾಲೋನಿಯಲ್ಲಿ ವಾಸ ಮಾಡುವ ಗೀತಾ ರವೀಂದ್ರ ಸಿದ್ದಿ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಸಿದ್ದಪ್ಪ ಗುಡಿ ತನಿಖೆ ಶುರು ಮಾಡಿದ್ದಾರೆ.

 

ShareSendTweetShare
ADVERTISEMENT
Previous Post

ಗಾಂಜಾ ಮಾರಾಟಕ್ಕೆ ಎಪಿಎಂಸಿಗೆ ಬಂದ ಯುವಕ!

Next Post

TSS ಮಾನ ಕಳೆದವರಿಗೆ ಇಲ್ಲ ಮೂರು ಕಾಸಿನ ಮರ್ಯಾದೆ!

Next Post

TSS ಮಾನ ಕಳೆದವರಿಗೆ ಇಲ್ಲ ಮೂರು ಕಾಸಿನ ಮರ್ಯಾದೆ!

ಅನಾಥ ಅಂಗವಿಕಲ ಬಾಲಕನಿಗೆ 40 ಸಾವಿರ ರೂ ಆದಾಯ!

ಮಹಿಳೆಯರ ಮೊಬೈಲ್ ಮೇಲೆ ರಹಸ್ಯ ಕಣ್ಣು!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.