ಅಂಕೋಲಾ: ದೀಪಾವಳಿ ಹಬ್ಬದ ವೇಳೆ ಬಾಳೆಗುಳಿ ಬಳಿ ಲಾರಿ ಅಪಘಾತವಾದ ಪರಿಣಾಮ ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಅಕ್ರಮ ಜಾನುವಾರು ಸಾಗಾಟ ಬೆಳಕಿಗೆ ಬಂದಿದೆ.
ಅಪಘಾತವಾದ ವಾಹನದಲ್ಲಿದ್ದ ಎರಡು ಎತ್ತು, 4 ಕೋಣ ಹಾಗೂ 9 ಎಮ್ಮೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಅಪಘಾತದಲ್ಲಿ ಮೂರು ಜಾನುವಾರುಗಳಿಗೂ ಗಾಯವಾಗಿದೆ. ಅಪಘಾತ ನಡೆದ ಕೂಡಲೇ ವಾಹನ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಎಲ್ಲಾ ಜಾನುವಾರುಗಳಿಗೆ ಮೇವು ಒದಗಿಸಿ ನೆರಳಿನಲ್ಲಿ ಆಶ್ರಯ ನೀಡಿದ್ದಾರೆ.
ಕೆಟ್ಟು ನಿಂತ ಲಾರಿಗೆ ಹಿಂಬ0ದಿಯಿoದ ಬಂದ ಅಕ್ರಮ ಜಾನುವಾರು ಸಾಗಾಟದ ವಾಹನ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಎರಡೂ ವಾಹನ ಜಖಂ ಆಗಿದ್ದು, ಲಾರಿ ಚಾಲಕನ ಬಗ್ಗೆಯೂ ಸುಳಿವು ಸಿಕ್ಕಿಲ್ಲ. ಲಾರಿ ವಶಕ್ಕೆ ಪಡೆದ ಪೊಲೀಸರು ಜಾನುವಾರುಗಳನ್ನು ಎಲ್ಲಿಂದ ಸಾಗಿಸಲಾಗುತ್ತಿತ್ತು? ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಹುಡುಕುತ್ತಿದ್ದಾರೆ.




