ಯಲ್ಲಾಪುರ: ಕ್ರಿಯಾತ್ಮಕ ಚಟುವಟಿಕೆಯಲ್ಲಿ ಮಕ್ಕಳನ್ನು ತೊಡಗಿಸುವ ಕಾಯಕದಲ್ಲಿ ಸವಣಗೇರಿ ಶಾಲೆ ಶಿಕ್ಷಕರು ನಿರಂತರವಾಗಿ ಪ್ರಯತ್ನಿಸುತ್ತಿದ್ದು, ಅದರ ಪ್ರತಿಫಲವಾಗಿ ಆ ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿದ್ದರು. ಅದರಲ್ಲಿ ಅನೇಕರು ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಕಿರಿಯರ ವಿಭಾಗದಲ್ಲಿ 11 ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಅದರಲ್ಲಿನ ನಾಲ್ಕು ಸ್ಪರ್ಧೆಗಳಲ್ಲಿ ಸವಣಗೇರಿ ಶಾಲೆ ಮಕ್ಕಳು ಮೊದಲಿಗರಾದರು. ಇನ್ನೂ ನಾಲ್ಕು ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದರು. ಒಂದು ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದರು.
ಇನ್ನೂ ಹಿರಿಯರ ವಿಭಾಗದಲ್ಲಿ 14 ಸ್ಪರ್ಧೆಗಳಿದ್ದು ಅಲ್ಲಿಯೂ 14 ಸ್ಪರ್ಧೆಗಳಲ್ಲಿ ಈ ಶಾಲೆಯ ಮಕ್ಕಳಿದ್ದರು. ಹಿರಿಯ ವಿಭಾಗದ ಐದು ಸ್ಪರ್ಧೆಗಳಲ್ಲಿ ಪ್ರಥಮ, ನಾಲ್ಕು ಸ್ಪರ್ಧೆಗಳಲ್ಲಿ ದ್ವಿತೀಯ ಹಾಗೂ ಒಂದು ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದರು. ಒಟ್ಟು 16 ಮಕ್ಕಳು ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ 19 ಬಹುಮಾನಗಳನ್ನು ಶಾಲೆಗೆ ತಂದರು.
ಸನ್ನಿಧಿ ಗಣಪತಿ ಭಟ್ಟ, ವೈಷ್ಣವಿ ವಿಘ್ನೇಶ್ವರ ಭಟ್ಟ, ಅರ್ಪಿತಾ ಮಂಜುನಾಥ್ ನಾಯ್ಕ, ವೈಷ್ಣವಿ ವಿಶ್ವನಾಥ್ ಭಟ್ಟ, ಪವಿತ್ರ ರವಿ ಮರಾಠಿ, ಸಾಕ್ಷಿತ್ ರವಿ ನಾಯ್ಕ, ಅನನ್ಯ ಅನಂತ ಗೌಡ, ವಿಲೋಕ್ ವಿಶ್ವನಾಥ ಭಟ್ಟ, ಪಾರ್ಥ ರಾಘವೇಂದ್ರ ಭಟ್ಟ, ಹರ್ಷಿಕಾ ರಾಮಾ ಗೊಂದಳಿ, ಶ್ರೀ ಗೋಪಾಲಕೃಷ್ಣ ಭಟ್ಟ ಸಾಧಕ ವಿದ್ಯಾರ್ಥಿಗಳು. ಸವಣಗೇರಿ ಶಾಲೆಗೆ ಸಂಜೀವಕುಮಾರ ಹೊಸ್ಕೇರಿ ಮುಖ್ಯಾಧ್ಯಾಪಕರಾಗಿದ್ದಾರೆ. ಗೀತಾ ನಾಯ್ಕ, ಪೂರ್ಣಿಮಾ ನಾಯ್ಕ, ಪವಿತ್ರಾ ಆಚಾರಿ, ಗೀತಾ ಪಟಗಾರ ಇಲ್ಲಿನ ಶಿಕ್ಷಕರಾಗಿದ್ದಾರೆ.
#S News Digitel Advertisement: ಕಂಪ್ಯುಟರ್ ಕಲಿಸಿ.. ನಿಮ್ಮ ಮಕ್ಕಳನ್ನು ಇನ್ನಷ್ಟು ಸ್ಮಾರ್ಟ ಆಗಿಸಿ. ಮಕ್ಕಳ ಯಶಸ್ಸಿಗೆ ಶ್ರಮಿಸುವ ಯಶಸ್ವಿ ಕಂಪ್ಯುಟರ್ – ಕಂಪ್ಯುಟರ್ ತರಗತಿಗಾಗಿ ವಾಟ್ಸಪ್ ಮಾಡಿ: 9483490345




