ಹೊನ್ನಾವರ: ಮಾವಿನಕಟ್ಟಾದಲ್ಲಿ ಅಂಗಡಿ ಹೊಂದಿದ್ದ ಕಾರ್ತಿಕ ನಾಗಪ್ಪ ನಾಯ್ಕ (26) ತನ್ನ ಅಂಗಡಿ ಮುಂದೆ ಸರಾಯಿ ಸೇವನೆಗೆ ಅವಕಾಶ ನೀಡಿ ಸಿಕ್ಕಿಬಿದ್ದಿದ್ದು, ಪೊಲೀಸ್ ಪ್ರಕರಣ ದಾಖಲಾಗಿದೆ.
ನ 6ರ ಸಂಜೆ 5.15ಕ್ಕೆ ಕಾರ್ತಿಕ ನಾಯ್ಕರ ಅಂಗಡಿ ಮುಂದಿನ ಸ್ಥಳದಲ್ಲಿ ಕೆಲವರು ಮದ್ಯ ಸೇವನೆ ಮಾಡುತ್ತಿದ್ದರು. ಅವರಿಗೆ ಕಾರ್ತಿಕ ನಾಯ್ಕ ಸರಾಯಿ ಸರಬರಾಜು ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದರು.
ಪಿಎಸ್ಐ ಭರತಕುಮಾರ್ ಅಲ್ಲಿ ತೆರಳಿದಾಗ ಕಾರ್ತಿಕ ನಾಯ್ಕ ಬಳಿ ಸರಾಯಿ ಮಾರಾಟಕ್ಕೆ ಪಡೆದ ಅನುಮತಿ ಪತ್ರ ಇರಲಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಸರಾಯಿ ಸೇವನೆಗೆ ಅವಕಾಶ ನೀಡುವುದು ಅಪರಾಧ ಎಂದು ಆತನಿಗೆ ಅರಿವಿರಲಿಲ್ಲ.
ಅನಧಿಕೃತ ಸರಾಯಿ ಮಾರಾಟ ಹಾಗೂ ಸೇವನೆಗೆ ಅವಕಾಶ ನೀಡಿದ ಕಾರಣ ಆತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅಲ್ಲಿದ್ದ ವಸ್ತುಗಳನ್ನು ವಶಕ್ಕೆ ಪಡೆದರು.




