ಕಾರವಾರ: `ಕೈಗಾ ಅಣು ವಿದ್ಯುತ್ ಘಟಕ ಸಂಪರ್ಕಿಸುವ ಹಬ್ಬುವಾಡ ರಸ್ತೆ ಹೊಂಡಗಳಿoದ ಕೂಡಿದ್ದು, ಕಳೆದ 10 ವರ್ಷಗಳಿಂದ ರಸ್ತೆ ದುರಸ್ಥಿಗೆ ಒತ್ತಾಯಿಸಿದರೂ ಕ್ರಮವಾಗಿಲ್ಲ’ ಎಂದು ಜಯಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ದಿಲೀಪ ಅರ್ಗೇಕರ ಅಸಮಧಾನ ವ್ಯಕ್ತಪಡಿಸಿದ್ದಾರೆ. `ಇನ್ನೂ ಒಂದು ವಾರದ ಒಳಗೆ ರಸ್ತೆ ಸರಿಪಡಿಸದೇ ಇದ್ದರೆ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
`ಮೊದಲಿನಿಂದಲೂ ಹಬ್ಬವಾಡ ರಸ್ತೆ ಅವ್ಯವಸ್ಥೆಗಳ ಆಗರವಾಗಿದೆ. ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ ಈ ರಸ್ತೆಗೆ ನಾನಾ ಪ್ರದೇಶದ ಜನ ಬರುತ್ತಾರೆ. ಈ ರಸ್ತೆ ಸರಿ ಇಲ್ಲದಿರುವುದು ನಗರಕ್ಕೆ ಕಪ್ಪು ಚುಕ್ಕೆಯಾಗಿದ್ದು, ರಿಕ್ಷಾ ಚಾಲಕರು ಸಹ ರಸ್ತೆ ಸರಿಯಿಲ್ಲದ ಕಾರಣ ನೊಂದಿದ್ದಾರೆ’ ಎಂದವರು ವಿವರಿಸಿದರು.
`ಗುಣಮಟ್ಟದ ರಸ್ತೆ ನಿರ್ಮಾಣದ ಜೊತೆ ಈ ಭಾಗದ ವಿದ್ಯುತ್ ದೀಪಗಳನ್ನು ಸರಿಪಡಿಸಬೇಕು’ ಎಂದು ಸಂಘಟನೆಯ ರೋಷನ್ ಹರಿಕಂತ್ರ, ಸುದೇಶ್ ನಾಯ್ಕ್. ಸುನಿಲ್ ತಾಂಡೇಲ್, ಮೋಹನ್ ಉಳ್ಳೇಕರ್ ಆಗ್ರಹಿಸಿದರು.




