6
  • Latest

ಒಂದೆರಡಲ್ಲ.. ಇದು ಐದಾರು ಆನೆಗಳ ಗುಂಪು | ರಾತ್ರಿಯಿಡಿ ಕಾಡಿದ ಕಾಡಾನೆ: ಶಿರಸಿ ಜನರ ಆತಂಕ ಇದೀಗ ದೂರ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ವಿಡಿಯೋ

ಒಂದೆರಡಲ್ಲ.. ಇದು ಐದಾರು ಆನೆಗಳ ಗುಂಪು | ರಾತ್ರಿಯಿಡಿ ಕಾಡಿದ ಕಾಡಾನೆ: ಶಿರಸಿ ಜನರ ಆತಂಕ ಇದೀಗ ದೂರ!

AchyutKumar by AchyutKumar
in ವಿಡಿಯೋ, ಸ್ಥಳೀಯ

ಶಿರಸಿ: ಶಿರಸಿ ನಗರ ಸುತ್ತಲಿನ ಪ್ರದೇಶದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಸಂಜೆಯವರೆಗೆ ಕಾಡಾನೆಗಳ ಸಂಚಾರ ನಡೆದಿದ್ದು, ಸಂಜೆ ವೇಳೆಗೆ ಎಲ್ಲಾ ಆನೆಗಳು ಬನವಾಸಿ ಕಡೆ ಮುಖ ಮಾಡಿವೆ. ಹೀಗಾಗಿ ತಾತ್ಕಾಲಿಕವಾಗಿ ಅರಣ್ಯಾಧಿಕಾರಿಗಳು ನಿಟ್ಟುಸುರು ಬಿಟ್ಟಿದ್ದಾರೆ.

ADVERTISEMENT

ಶನಿವಾರ ರಾತ್ರಿಯಿಂದ ಆನೆ ನಗರ ಪ್ರವೇಶಿಸದಂತೆ ತಡೆಯಲು ಅರಣ್ಯ ಸಿಬ್ಬಂದಿ ನಾನಾ ಬಗೆಯ ಕಸರತ್ತು ನಡೆಸಿದರು. ರಾತ್ರಿ ಬನವಾಸಿ ರಸ್ತೆಯ ಪೆಡಂಬೂಲ್ ಸಮೀಪದ ತೋಟಗಾರಿಕಾ ಕಾಲೇಜು ಸುತ್ತ ಸಂಚರಿಸಿದವು. ಅಲ್ಲಿನ ತವರುಮನೆ ತೋಟದಲ್ಲಿ ಕಾಡಾನೆ ಠಿಕಾಣಿ ಹೂಡಿದ್ದು, ರಾತ್ರಿಯಿಡಿ ಅರಣ್ಯ ಸಿಬ್ಬಂದಿ ಅಲ್ಲಿ ಕಾವಲು ಕಾದರು. ಸ್ವಲ್ಪ ದಿಕ್ಕು ಬದಲಿಸಿದರೂ ಆನೆಗಳು ನಗರ ಪ್ರವೇಶಿಸುವ ಆತಂಕವಿದ್ದ ಹಿನ್ನಲೆ ಕಟ್ಟೆಚ್ಚರವಹಿಸಲಾಗಿತ್ತು.

ಅದಾಗಿಯೂ ರಾತ್ರಿ ವೇಳೆ ಕಾಡಾನೆಯೊಂದು ನಗರದ ಕಡೆ ಮುಖ ಮಾಡಿತ್ತು. ಬನವಾಸಿ ರಸ್ತೆಯ ರೇಷ್ಮೆ ಇಲಾಖೆ ಅಕ್ಕ-ಪಕ್ಕದಲ್ಲಿ ಕಾಡಾನೆಗಳು ಸಂಚರಿಸಿದ್ದು, ಮನೆಯಿಂದ ಹೊರಬರದಂತೆ ಅರಣ್ಯ ಇಲಾಖೆಯವರು ಪದೇ ಪದೇ ಜನರಿಗೆ ಸೂಚನೆ ನೀಡುತ್ತಿದ್ದರು. ಬನವಾಸಿ ರಸ್ತೆಯ ಕಡೆ ವಾಕಿಂಗ್’ಗೆ ಸಹ ಬರಬೇಡಿ ಎಂದು ಅರಣ್ಯ ಸಿಬ್ಬಂದಿ ಕಟ್ಟಪ್ಪಣೆ ಹೊರಡಿಸಿದ್ದರು.

Advertisement. Scroll to continue reading.

ರಾತ್ರಿ 2ಗಂಟೆಯ ಆಸುಪಾಸಿಗೆ ಆನೆ ಕುಳುವೆ ರಸ್ತೆ ಕಡೆ ಸಂಚರಿಸಿದ್ದು, ಆ ಮಾರ್ಗದಲ್ಲಿನ ವಾಹನ ಓಡಾಟಕ್ಕೆ ತಡೆ ಒಡ್ಡಲಾಯಿತು. ಜನರು ಸಹ ಆ ಕಡೆ ಹೋಗಬೇಡಿ ಎಂದು ಅರಣ್ಯ ಸಿಬ್ಬಂದಿ ಮನವಿ ಮಾಡುತ್ತಿದ್ದರು. ಬೆಳಗ್ಗೆ ಬಿಸಿಲು ಬಿದ್ದ ನಂತರ ಕಾಡಾನೆಗಳು ಶಿರಸಿ ನಗರದ ಅಂಬಾಗಿರಿ ಮೊಟಿನಸರ್ ಭಾಗದಲ್ಲಿ ಕಾಣಿಸಿಕೊಂಡವು. ತರಕನಳ್ಳಿ ಮೂಲಕ ಅದನ್ನು ಕಾಡಿಗೆ ಅಟ್ಟುವ ಪ್ರಯತ್ನ ಮುಂದುವರೆಯಿತು.

Advertisement. Scroll to continue reading.

ಅAಬಾಗಿರಿ, ಗಾಂಧಿನಗರ, ರಾಮನಬೈಲ್, ಬನವಾಸಿ ರಸ್ತೆ, ತೋಟಗಾರಿಕಾ ಕಾಲೇಜು ಕಡೆ ಆನೆ ಸಂಚಾರ ಸಾಧ್ಯತೆ ಹೆಚ್ಚಿರುವುದರಿಂದ ಈ ಭಾಗದಲ್ಲಿ ಜನ ಓಡಾಟ ನಡೆಯದಂತೆ ಪೊಲೀಸರು ಎಚ್ಚರವಹಿಸಿದರು. ಅರಣ್ಯ ಸಿಬ್ಬಂದಿ ಸಹ ಕಾಡಿನಲ್ಲಿ ಗಸ್ತು ತಿರುಗಿ ಕಾಡಾನೆ ಹಾವಳಿ ಆಗದಂತೆ ತಡೆದರು.

ಭಾನುವಾರ ಸಂಜೆ 7 ಗಂಟೆ ಅವಧಿಗೆ ಕಾಡಾನೆಗಳ ಗುಂಪು ತೆರಕನಳ್ಳಿ ಕಾಡಿನ ಮೂಲಕ ಊರು ತೊರೆಯಿತು. ಕೆರೆಗೈ, ಗಡಳ್ಳಿ ಭಾಗಗಳಲ್ಲಿ ಸಂಚರಿಸಿ ಕಾಡು ಸೇರಿತು. ಅಲ್ಲಿಗೆ ಅರಣ್ಯ ಅಧಿಕಾರಿಗಳ ಜೊತೆ ಪೊಲೀಸರು ಸಹ ನಿಟ್ಟುಸುರು ಬಿಟ್ಟರು.

ಭಾನುವಾರ ಸಂಜೆ ಕಾಡಾನೆಗಳು ಸಾಲಿನಲ್ಲಿ ಕಾಡು ಸೇರಿದ ವಿಡಿಯೋ ಇಲ್ಲಿ ನೋಡಿ..

 

 

Previous Post

ನಿವೃತ್ತ ನೌಕರನ ತಲೆ ಒಡೆದ ಸರ್ಕಾರಿ ಬಸ್ ಚಾಲಕ!

Next Post

ಜಿಲ್ಲಾಕೇಂದ್ರದಲ್ಲಿ ಗೂಡಾಚಾರಿಕೆ ಅನುಮಾನ: ಜಿಪಿಎಸ್ ಹಕ್ಕಿಗೆ ಕ್ಯಾಮರಾ ಕಣ್ಣು!

Next Post

ಜಿಲ್ಲಾಕೇಂದ್ರದಲ್ಲಿ ಗೂಡಾಚಾರಿಕೆ ಅನುಮಾನ: ಜಿಪಿಎಸ್ ಹಕ್ಕಿಗೆ ಕ್ಯಾಮರಾ ಕಣ್ಣು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ