ಹೊನ್ನಾವರ: ಮಾಳ್ಕೊಡ್ ಹರಕನಳ್ಳಿಯ ಗಜೇಂದ್ರ ಅಂಬಿಗ ಹಾಗೂ ಗಣಪತಿ ಅಂಬಿಗರ ನಡುವೆ ಜಗಳವಾಗಿದೆ. ಈ ಜಗಳ ಹೊಡೆದಾಟಕ್ಕೂ ಕಾರಣವಾಗಿದೆ.
ನ 1ರಂದು ಗಜೇಂದ್ರ ಕುಪ್ಪಯ್ಯ ಅಂಬಿಗ ತಮ್ಮ ತಾಯಿ ಜೊತೆ ನಡೆದು ಹೋಗುತ್ತಿದ್ದಾಗ ಅವರನ್ನು ಅಡ್ಡಗಟ್ಟಿದ ಗಣಪತಿ ನಾಗಪ್ಪ ಅಂಬಿಗ ನಿಂದಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಗಜೇಂದ್ರ ಅವರ ಕೆನ್ನೆಗೆ ಬಾರಿಸಿದ್ದಾರೆ. ಜೊತೆಗೆ ಅವರ ತಾಯಿಗೂ ಕೆಟ್ಟದಾಗಿ ಬೈದಿದ್ದಾರೆ.
ಅವರಿಬ್ಬರ ನಡುವೆ ಈ ರೀತಿಯ ಬೈಗುಳ ಇದೇ ಮೊದಲಲ್ಲ. ಈ ಹಿಂದೆ ಸಹ ಗಣಪತಿ ಅಂಬಿಗರಿoದ ಗಜೇಂದ್ರ ಅಂಬಿಗ ಕುಟುಂಬದವರು ಜೀವ ಬೆದರಿಕೆಯ ಎಚ್ಚರಿಕೆ ಪಡೆದಿದ್ದರು. ಈ ಹಿನ್ನಲೆ ಗಜೇಂದ್ರ ಅಂಬಿಗ ಇದೀಗ ಪೊಲೀಸ್ ದೂರು ನೀಡಿದ್ದಾರೆ.




