ಯಲ್ಲಾಪುರ: ಬೆಂಗಳೂರಿನ ಮಿಜೋರಿಯರ್ ಸಂಸ್ಥೆಯವರು ಯಲ್ಲಾಪುರಕ್ಕೆ ಭೇಟಿ ನೀಡಿದ್ದು, ಇಲ್ಲಿನ ಮಹಾಸಂಘ ಹಾಗೂ ಒಕ್ಕೂಟ ಕಾರ್ಯಗಳ ಮೌಲ್ಯಮಾಪನ ನಡೆಸಿದ್ದಾರೆ.
ಕಾರವಾರದ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಹಾಗೂ ಬೆಂಗಳೂರಿನ ಕ್ರಾಸ್ ಸಮಾಜ ಸೇವಾ ಸಂಸ್ಥೆ ಸಹಯೋಗದಲ್ಲಿ ರವೀಂದ್ರ ನಗರದ ಭಾಗ್ಯೋದ್ಯಯ ಸಭಾ ಭವನದಲ್ಲಿ ಸಭೆ ನಡೆಸಿದ ಮಿಜೋರಿಯರ್ ಸಂಸ್ಥೆಯವರು ವಿವಿಧ ದಾಖಲೆಗಳ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ನೂತನ ನಗರ, ಕಿರವತ್ತಿ ಹಾಗೂ ಅಂಬೇಡ್ಕರ ನಗರಕ್ಕೆ ಭೇಟಿ ನೀಡಿ ಅಲ್ಲಿ ಸಂಘಗಳ ಚಟುವಟಿಕೆಗಳನ್ನು ಪರಿಶೀಲಿಸಿದರು.
ಮಹಾಸಂಘಗಳ ನೆರವು ಪಡೆದು ಮಹಿಳೆಯರು ಸ್ವ ಉದ್ಯೋಗ ಮಾಡುತ್ತಿರುವುದು, ಸಂಘಗಳ ಅಭಿವೃದ್ಧಿ ಚಟುವಟಿಕೆ ಹಾಗೂ ಮಹಾಸಂಘದಿoದ ಸಮಾಜಕ್ಕೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ ಅವರು ದಾಖಲಿಸಿಕೊಂಡರು. ಉಡುಪಿಯ ಸಂಪದ ಸಂಸ್ಥೆಯ ಸ್ಟ್ಯಾನ್ಲಿ ಫರ್ನಾಂಡಿಸ್, ಹಾಸನದ ಸಿ.ಎಂ.ಎಸ್.ಎಸ್.ಎಸ್. ಸಂಸ್ಥೆಯ ಭಾಗ್ಯ ಮೇರಿ. ಪ್ರಮೀಳಾ ಇನ್ನಿತರರು ಮೌಲ್ಯಮಾಪನ ತಂಡದಲ್ಲಿದ್ದರು.
ಕೆಡಿಡಿಸಿ ಸಂಸ್ಥೆಯ ನಿರ್ದೇಶಕರಾದ ಫಾದರ್ ಸ್ಟೀವನ್ ಡಿಸೋಜ ಅವರು ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಯಲ್ಲಾಪುರ ತಾಲೂಕಿನ ಭಾಗ್ಯೋದಯ ತಾಲೂಕ ಮಹಿಳಾ ಒಕ್ಕೂಟದ ಅಧ್ಯಕ್ಷೆ ರತ್ನಾ ನಾಯ್ಕ, ಕಾರ್ಯದರ್ಶಿ ಸುಮಂಗಲ, ಉಪಾಧ್ಯಕ್ಷೆ ಗೀತಾ ಭಂಡಾರಿ, ಖಜಾಂಚಿ ಕುಮದಾ ಸಾಣೆ ಇನ್ನಿತರರು ಕಾರ್ಯಚಟುವಟಿಕೆಯ ದಾಖಲೆಗಳನ್ನು ಹಾಜರುಪಡಿಸಿದರು. ಕೆಡಿಡಿಸಿ ಸಂಸ್ಥೆಯ ಹರಿಶ್ಚಂದ್ರ ಅವರು ಆಗಮಿಸಿದವರಿಗೆ ಸಮಗ್ರ ಮಾಹಿತಿ ನೀಡಿದರು.
ಒಕ್ಕೂಟಗಳ ಅಭಿವೃದ್ಧಿಯ ಮೌಲ್ಯಮಾಪನಕ್ಕಾಗಿ ಈ ವಿಶೇಷ ತಂಡ ಆಗಮಿಸಿದ್ದು, ವಿವಿಧ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದೆ. ಕಳೆದ ಒಂದುವರೆ ವರ್ಷದ ಅವಧಿಯಲ್ಲಿ ಮಹಾಸಂಘಗಳು ಪ್ರಗತಿ ಸಾಧಿಸಿದನ್ನು ಈ ತಂಡದವರು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ.




